ಕುಮಾರವ್ಯಾಸ ಕಥಾಂತರ-ಆದಿ-ಸಭಾ ಪರ್ವ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 320

₹ 350.00




Year of Publication: 2013
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

”ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎಂದು ಕವಿ ಕುವೆಂಪು ಹಾಡಿದ್ದಾರೆ. ಗದುಗಿನ ಭಾರತ ಅಥವಾ ಕುಮಾರವ್ಯಾಸ ಭಾರತ ಎಂದು ಕರೆಯಲಾಗುವ ಗದುಗಿನ ವೀರನಾರಾಯಣನ ಭಕ್ತ ಕೋಳಿವಾಡದ ನಾರಾಯಣಪ್ಪ ರಚಿಸಿದ್ದು. ಮೌಖಿಕ ಪರಂಪರೆಯ ಗಮಕಿಗಳು ಹಾಗೂ ವಾಚನದ ಮೂಲಕ ಮನೆ ಮನೆ -ಮನ ತಲುಪಿದೆ ಕುಮಾರವ್ಯಾಸ ಭಾರತ. ಭಾಮಿನಿ ಷಟ್ಡದಿಯಲ್ಲಿ ಕುಮಾರವ್ಯಾಸ ಭಾರತವನ್ನು ಎಚ್.ಎಸ್. ವೆಂಕಟೇಶಮೂರ್ತಿ ಸರಳವಾಗಿ ಓದಿಸಿಕೊಂಡು ಹೋಗುವ ಕಥಾಂತರ ಮಾಡಿದ್ದಾರೆ. ಇದೊಂದು ಭಾಷಾಂತರದ ಹಾಗೆ. ಒಂದು ಕೃತಿ ಓದುಗನಿಂದ ದೂರ ಹೋಗದಂತೆ ನಡೆಸಿದ ವಿಭಿನ್ನ ಪ್ರಯತ್ನ. ಕುಮಾರವ್ಯಾಸ ಭಾರತದ ಕಥಾಂತರವನ್ನು ಮೂರು ಭಾಗಗಳಲ್ಲಿ ಎಚ್ಎಸ್ವಿ ಅವರು ಪ್ರಕಟಿಸಿದ್ದಾರೆ. ಈ ಸಂಪುಟದಲ್ಲಿ ಆದಿ ಪರ್ವ ಹಾಗೂ ಸಭಾ ಪರ್ವದ ಪದ್ಯಗಳ ಕಥಾಂತರಗಳಿವೆ. ಮೂಲ ಪಠ್ಯ ಓದಲು ಸಾಧ್ಯವಾಗದವರಿಗೆ ಹಾಗೂ ಮೂಲಪಠ್ಯಕ್ಕೆ ಹೋಗುವಂತೆ ಮಾಡುವುದಕ್ಕೆ ಇದೊಂದು ಉತ್ತಮವಾದ ಏಣಿ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books