ಕುಮಾರವ್ಯಾಸಭಾರತ ಎಂಬ ಕರ್ಣಾಟಭಾರತಕಥಾಮಂಜರಿ (ಸಂಪುಟ 1 ಮತ್ತು 2)

Author : ಟಿ.ವಿ. ವೆಂಕಟಾಚಲಶಾಸ್ತ್ರೀ

Pages 2020

₹ 2000.00




Year of Publication: 2022
Published by: ಗಣಕ ಸಾಹಿತ್ಯ ಪರಿಷತ್ತು
Address: # 64/2, ಮೊದಲನೇ ಮಹಡಿ, 3ನೇ ತಿರುವು, 1ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು - 560 018
Phone: 8026615972

Synopsys

ಕರ್ನಾಟಕ ಸರ್ಕಾರ ಹಾಗೂ ತುಮಕೂರು ವಿಶ್ವವಿದ್ಯಾಲಯದ ಕುಮಾರವ್ಯಾಸ ಕನ್ನಡ ಅಧ್ಯಯನ ಪೀಠದ ಸಹಕಾರದಲ್ಲಿ ಗಣಕ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಎರಡು ಸಂಪುಟಗಳ ಬೃಹತ್ ಗ್ರಂಥಗಳಿವು- ಕುಮಾರವ್ಯಾಸಭಾರತ ಎಂಬ ಕರ್ಣಾಟಭಾರತಕಥಾಮಂಜರಿ (ಸಂಪುಟ 1 ಮತ್ತು 2). ಹಿರಿಯ ವಿದ್ವಾಂಸ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಅವರು ಸಂಪಾದಿಸಿದ್ದಾರೆ.

ವೇದವ್ಯಾಸರು ರಚಿಸಿದ ಮಹಾಭಾರತವನ್ನು ಕನ್ನಡದ ಭಾಮಿನಿ ಷಟ್ಪದಿಯಲ್ಲಿ ಕುಮಾರವ್ಯಾಸನು (ಗದುಗಿನ ನಾರಾಣಪ್ಪ) ಬರೆದಿದ್ದು, ಈತನು ತನ್ನನ್ನು ತಾನು ಕುಮಾರವ್ಯಾಸ ಎಂದು ಹೇಳಿಕೊಂಡಿದ್ದರ ಹಿನ್ನೆಲೆಯಲ್ಲಿ ಮಹಾಭಾರತವನ್ನು ಈ ಕೃತಿಯನ್ನು ಕುಮಾರವ್ಯಾಸ ಭಾರತ ಎಂದಾಗಿದೆ. ಈ ಕಾವ್ಯಕ್ಕೆ ಕರ್ನಾಟ ಭಾರತ ಕಥಾ ಮಂಜರಿ’ ಎಂದೂ ಹೇಳುವುದುಂಟು. ಮೊದಲ ಭಾಗದಲ್ಲಿ ಒಟ್ಟು 10 ಪರ್ವಗಳಿದ್ದು, 152 ಸಂಧಿಗಳಿವೆ.  ಕುಮಾರವ್ಯಾಸನನ್ನು ರೂಪಕ ಚಕ್ರವರ್ತಿ ಎಂದೂ ಹೇಳುತ್ತಾರೆ. ಕುಮಾರವ್ಯಾಸನ ಮಹಾಭಾರತದಲ್ಲಿ ನಿಸರ್ಗದ ವರ್ಣನೆ, ಪಾತ್ರಗಳ ವರ್ಣನೆ, ಸನ್ನಿವೇಶಗಳ ವರ್ಣನೆ ಪ್ರತಿ ಪದವೂ  ನವರಸಗಳ ಪೈಕಿ ಒಂದರ ಕೆಲವೊಮ್ಮೆ ಹಲವು ರಸಗಳ ಮಿಶ್ರಣವಾಗಿ ಓದುಗರಿಗೆ ಓದಿನ ಉತ್ಸಾಹವನ್ನು ಇಮ್ಮಡಿಸುತ್ತದೆ. "ಮಹತ್ತಿನೊಡನೆ ಜನಪ್ರಿಯತೆಯನ್ನೂ ಪಡೆದಿರುವ ವಿರಳ ಸಂಯೋಗವುಳ್ಳ ಕವಿಗಳಲ್ಲಿ ಈತ ಅಗ್ರಗಣ್ಯನು. ಕಲಿಯದವರಿಗೂ ಕಾಮಧೇನುವಾಗಿ ಕನ್ನಡ ನಾಡಿನ ಹೃದಯವೇದಿಕೆಯಲ್ಲಿ ಅಗ್ರಸ್ಥಾನ ಪಡೆದ ಮಹಾಧ್ಯಕ್ಷನಾಗಿದ್ದಾನೆ" ಎಂದು ಕವಿ ಕುವೆಂಪು ಅಭಿಪ್ರಾಯಪಟ್ಟಿದ್ದು, ಅತಿಶಯೋಕ್ತಿಯಲ್ಲ. ಮಹಾಭಾರತವನ್ನು ಕೇವಲ ಕಥೆಯಾಗಿ ಮಾತ್ರವಲ್ಲ; ಎಲ್ಲ ರಸಗಳ ಸಂಗಮವಾಗಿಸಿ ಕವಿ ಕುಮಾರವ್ಯಾಸ, ಕನ್ನಡ ಪ್ರಾಚೀನ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದರ ಪೈಕಿ ಈ ಕೃತಿ ಅತ್ಯಂತ ಮಹತ್ವದ್ದು.  

 ಕುಮಾರವ್ಯಾಸ ಭಾರತ ಎಂಬ ಪರಿಷ್ಕೃತ ಪಠ್ಯವನ್ನು, ಹೊಸಗನ್ನಡ, ಗದ್ಯಾನುವಾದ, ಕ್ಲಷ್ಟಪದಗಳ ಅರ್ಥ, ಟಿಪ್ಪಣಿಗಳು, ವಿಶೇಷ ವಿಷಯಗಳು, ಪರಾಮರ್ಶನ ಸಾಹಿತ್ಯ, ಪದ್ಯಗ:ಳ ಅಕಾರಾದಿಯ ಶಿಸ್ತು ಈ ಕೃತಿಯ   ವೈಶಿಷ್ಟ್ಯ. ಭೀಷ್ಮಪರ್ವ, ದ್ರೋಣಪರ್ವ, ಶಲ್ಯಪರ್ವ ಹಾಗೂ ಗದಾಪರ್ವ ಹೀಗೆ ಈ ನಾಲ್ಕು ಪರ್ವಗಳ ಕಥೆಯನ್ನು ಓಳಗೊಂಡಿದೆ. 

About the Author

ಟಿ.ವಿ. ವೆಂಕಟಾಚಲಶಾಸ್ತ್ರೀ
(26 August 1933)

ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು. ಶಾಸ್ತ್ರಿಗಳು,1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.  ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು. ವ್ಯಾಕರಣ, ಛಂದಸ್ಸು, ...

READ MORE

Related Books