ಕುಂಬಳೆ ಸುಂದರ ರಾವ್‌

Author : ಗಣರಾಜ ಕುಂಬೈ

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

 ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 17ನೇ ಪುಸ್ತಕ. ಕುಂಬಳೆ ಎನ್ನುವುದು ಕಾಸರಗೋಡು ಸಮೀಪದ ಒಂದು ಪುಟ್ಟ (ಊರಿನ) ಪೇಟೆಯ ಹೆಸರು. ಆ ಹೆಸರಿಗೆ ಸಾರ್ಥಕ್ಯ ತಂದುಕೊಟ್ಟವರು ಇಬ್ಬರು: ಕ್ರಿಕೆಟ್‌ನ ಅನಿಲ್ ಕುಂಬ್ಳೆ ಮತ್ತು ಯಕ್ಷಗಾನ ಕ್ಷೇತ್ರದ ಅನನ್ಯ ಸಾಧಕ ಕುಂಬಳೆ ಸುಂದರರಾವ್. ಸುಂದರರಾವ್ ಎಂದೊಡನೆ ಕಣ್ಣಮುಂದೆ ಬರುವುದು ಅವರ ಮಾತು. ಆರು ದಶಕಗಳ ಕಲಾ ಜೀವನದಲ್ಲಿ ಅವರು ರಾಮ, ಕೃಷ್ಣ, ಭರತ, ಉತ್ತರ, ಸುಧನ್ವ, ಚಾರ್ವಾಕರಂಥ ಹಲವು ಪಾತ್ರಗಳನ್ನು ನಮ್ಮ ನಡುವೆ ಮತ್ತೆ ಮತ್ತೆ ಸೃಷ್ಟಿಸಿದರು. ಆಯಾ ಪಾತ್ರಗಳ ಜೊತೆ ನಾವೂ ಕುಳಿತು ಮಾತನಾಡುವ ಹಾಗೆ ಮಾಡಿದರು. ನಮ್ಮಲ್ಲಿ ಈ ಪಾತ್ರಗಳು ಇರುವುದನ್ನು ನಾವೇ ನೋಡುವ ಹಾಗೆ ಬೆಟ್ಟು ಮಾಡಿ ತೋರಿಸಿದರು. ಕೂಡ್ಲು, ಕುಂಡಾವು, ಸುರತ್ಕಲ್, ಧರ್ಮಸ್ಥಳ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಂಘಟನಾ ಕ್ಷೇತ್ರಗಳಲ್ಲಿ ಅರ್ಥವನ್ನು ಸೃಷ್ಟಿಸುವ ಅರ್ಥಧಾರಿಯಾಗಿ ತೊಡಗಿಸಿಕೊಂಡ ಅವರ ಮಾತು ಅವರದ್ದೇ. ಅದು ಪುರಾಣದ್ದೂ ಹೌದು, ವರ್ತಮಾನದ್ದೂ ಹೌದು.  ಸಹಜವೂ ಸುಭಗವೂ ಸುಲಲಿತವೂ ಆಗಿ ನಾವು ಆ ಮಾತಿನಿಂದ ಹೊರಬಾರದ ಹಾಗೆ, ಆ ಮೋಡಿ ಅದ್ಭುತ ಮತ್ತು ರಮ್ಯ. ಕುಂಬಳೆರಾಯರನ್ನು ಪರಿಚಯಿಸುವ ಕೃತಿಯಿದು.

About the Author

ಗಣರಾಜ ಕುಂಬೈ

ಕಾಸರಗೋಡಿನವರಾದ ಗಣರಾಜ ಕುಂಬೈ ಅವರು ಪುತ್ತೂರು ತಾಲ್ಲೂಕಿನ ರಾಮಕುಂಜದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಯಕ್ಷಗಾನದಲ್ಲಿ ಅರ್ಥಧಾರಿಗಳೂ, ವೇಷಧಾರಿಗಳೂ ಆಗಿರುವ ಅವರು ಬಿರಿಯುತ್ತಿರುವ ಹೂವು, 'ಅರಳು' ಕವನ ಸಂಕಲನದ ಕವಿ. ಪುಣ್ಯಕೋಟಿ (ಸಾಮಾಜಿಕ), ಮರು ಬಿಂದಿಗೆ (ಪೌರಾಣಿಕ) ನಾಟಕಗಳನ್ನೂ ಪ್ರಕಟಿಸಿದ್ದಾರೆ. 'ಹಾಡುಗಳ ಮಣಿಸರ' ಎಂಬ ಜನಪದ ಹಾಡುಗಳ ಸಂಕಲನಗಳ ಮೂಲಕ ಜಾನಪದ ಪ್ರೀತಿ ತೋರಿದವರು. ಕೋಟೆ ಕ್ಷತ್ರಿಯ ಜನಾಂಗದ ಬಗ್ಗೆ ಸಂಶೋಧನೆ ನಡೆಸಿರುವ ಅವರು ಕುಂಬಾರ ಜನಾಂಗಗಳ ಬಗೆಗೂ ಅಧ್ಯಯನ ಮಾಡಿದ್ದಾರೆ. 'ಚೆನ್ನವೀರ ಕಣವಿ' (ಬದುಕು ಬರೆಹ), 'ತುಳು ವಿಶ್ವರೂಪೊ ದರ್ಶನೊ' (ಅರ್ಥ ...

READ MORE

Related Books