ಕುರುಡು

Author : ವಿಜಯಾ ಸುಬ್ಬರಾಜ್

₹ 325.00




Year of Publication: 2022
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಲೇಖಕಿ ವಿಜಯಾ ಸುಬ್ಬರಾಜ್‌ ಅವರ ಅನುವಾದಿತ ಕೃತಿ ʻಕುರುಡುʼ. ಪೋರ್ಚುಗೀಸ್‌ನ ಲೇಖಕ ಜೋಸೆ ಸರಮಾಗೋ ಅವರು ಬರೆದ ʻಬ್ಲೈಂಡ್‌ನೆಸ್‌ʼ ಕೃತಿಯನ್ನು ಮೊದಲು ಲೇಖಕ ಜಿಯೋವನ್ನಿ ಪೋಂಟಿಯೆರೊ  ಆಂಗ್ಲಭಾಷೆಗೆ ತಂದಿದ್ದು, ಬಳಿಕ ಅದನ್ನು ವಿಜಯಾ ಅವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಜೋಸೆ ಸರಮಾಗೋ ಅವರು ಒಂದು ಬಿಳಿ ಕುರುಡಿನ ಸೋಂಕು ಹೇಗೆ ಇಡೀ ನಗರದ ಪ್ರಜೆಗಳ ಬದುಕು, ಸಮಾಜ, ಸರಕಾರ, ಆರ್ಥಿಕತೆ ಹೀಗೆ ಎಲ್ಲಾ ರಂಗಗಳಲ್ಲಿ ಅವ್ಯವಸ್ಥೆ ಹಾಗೂ ಅರಾಜಕತೆ ತಾಂಡವವಾಡುತ್ತದೆ ಎಂಬ ಬಗ್ಗೆ ಹೇಳುತ್ತಾರೆ. ಇದರಿಂದಾಗಿ ಸಾಮಾನ್ಯ ಜನರ ಅದರಲ್ಲೂ ಅಸಹಾಯಕರ, ಕುರುಡರ ಮೇಲೆ ನಡೆಯುವ ದೌರ್ಜನ್ಯ, ಸಾವು, ನೋವು, ಅತ್ಯಾಚಾರ, ದಬ್ಬಾಳಿಕೆಗಳನ್ನು ಓದುಗರ ಕರುಳು ಹಿಂಡುವಂತೆ ಚಿತ್ರಿಸಿದ್ದಾರೆ. ಆದರೆ ಈ ಪುಸ್ತಕದ ವಿಶೇಷತೆ ಇಲ್ಲಿ ಬರುವ ಎಲ್ಲಾ ಪಾತ್ರಗಳು ಹಾಗೂ ಪ್ರದೇಶಗಳು ಅನಾಮಧೇಯವಾಗಿರುವುದು. ಇಲ್ಲಿ ಒಟ್ಟು 17 ಅಧ್ಯಾಯಗಳಿವೆ. 

 ಇನ್ನು, ಕಾದಂಬರಿಯ ಬಗ್ಗೆ ವಿಜಯಾ ಸುಬ್ಬರಾಜ್‌ ಅವರು, “ಜೋಸೆ ಸರಮಾಗೋ ಹತ್ತಾರು ಕೃತಿಗಳನ್ನು ಬರೆದಿದ್ದರೂ, ಅವುಗಳ ವಸ್ತು ಮೂಲಭೂತವಾಗಿ, ಎಲ್ಲ ಲೇಖಕರಿಗಿಂತ ಭಿನ್ನ. ಬ್ಲೈಂಡ್‌ನೆಸ್‌ ಕಾದಂಬರಿಯಲ್ಲಿ ಎಂದೂ ಎಲ್ಲಿಯೂ ಕಂಡೂ ಕೇಳಿಯೂ ಅರಿಯದ ಬಿಳಿ ಕುರುಡು ಸೋಂಕಿನ ಕಥೆಯನ್ನು ಕಲ್ಪನೆಯ ಹಿನ್ನೆಲೆಯೊಂದಿಗೆ ಹೆಣೆದು ಅದನ್ನೊಂದು ರೂಪಕವಾಗಿಸಿ, ಅದ್ಭುತವಾದ, ಭೀಭತ್ಸನಾದ, ಭಯಾನಕವಾದ ಸನ್ನಿವೇಶಗಳೊಂದಿಗೆ, ವಿಶಿಷ್ಟವಾಗಿಯೂ ವಿಭಿನ್ನವಾಗಿಯೂ ಕಾಣಿಸುವುದರ ಜೊತೆಗೆ, ಅದನ್ನೊಂದು ದಾರ್ಶನಿಕ ನೆಲೆಗೆ ಕೊಂಡೊಯ್ದಿದ್ದಾನೆ.  

 ಭೌತಿಕವಾಗಿ ಮಾನಸಿಕ ಯಾತನೆ ಅನುಭವಿಸುವುದು, ಮನುಷ್ಯನಲ್ಲಿನ ಎರಡು ಪ್ರವೃತ್ತಿಗಳಲ್ಲಿ, ಮಾನ ಪ್ರವೃತ್ತಿ ಅಥವಾ ಮಾನವತ್ವ ಹಿಂದೆ ಸರಿದು ರಾಕ್ಷಸ ಪ್ರವೃತ್ತಿಯ ಲಕ್ಷಣವಾದ ಕೌರ್ಯ ವಿಜೃಂಭಿಸುತ್ತದೆ. ಇಲ್ಲಿನ ಒಂದು ವ್ಯಂಗ್ಯವೆನ್ನುವಂತೆ, ನಗರದ ಪ್ರಜೆಗಳೆಲ್ಲ ಸೋಂಕಿಗೆ ಒಳಗಾಗಿ, ಕೇವಲ ಒಬ್ಬ ಮಹಿಳೆ ಮಾತ್ರವೇ ಸೋಂಕಿನಿಂದ ಪಾರಾಗುತ್ತಾಳೆ. ಇಡೀ ಕಾದಂಬರಿಯ ನಿರೂಪಕಿ ಇವಳೇ. ಅಲ್ಲದೆ, ಇಂತಹ ವಿಪತ್ತಿನಿಂದಾಗಿ ಉಂಟಾದ ಪರಿಣಾಮಗಳು, ಪ್ರಜೆಗಳ ಬದುಕುಗಳಲ್ಲಿ ಉಂಟಾದ ಸ್ಥಿತ್ಯಂತರಗಳು, ಕುರುಡು ಸೋಂಕಿಗೆ ಒಳಗಾದವರು, ಸೋಂಕಿತರ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್‌ನಲ್ಲಿ ಇದ್ದವರು ಅನುಭವಿಸುವ, ನರಕಯಾತನೆ ಇತ್ಯಾದಿಗಳಿಗೆಲ್ಲ ಇವಳೇ ಸಾಕ್ಷಿ ಪ್ರಜ್ಞೆಯಾಗಿಯೂ ನಿಲ್ಲುತ್ತಾಳೆ. 

 ಇಂತಹ ನಿರಾಶಾದಾಯಕವಾದ ಮತ್ತು ಮನುಷ್ಯನ ಘನತೆ, ಗೌರವಗಳಿಗೆ ಕಾಸಿನ ಬೆಲೆಯೂ ಇಲ್ಲದಂತಾಗಿಸಿದ ಈ ಕಾದಂಬರಿಯ ವಸ್ತು, ಕ್ರಿಯೆ, ದುರಂತ ಸನ್ನಿವೇಶಗಳು - ಇವುಗಳ ನಡುವೆಯೂ ಒಂದು ಭರವಸೆಯ ಆಶಾಕಿರಣ, ಒಂದು ಗುಂಪಿನ ಕುರುಡು ವ್ಯಕ್ತಿಗಳ, ನಡೆ, ನುಡಿ, ಆತ್ಮೀಯತೆ, ಸ್ನೇಹ, ಪರೋಪಕಾರಿ ಮನೋಭಾವ, ಸಂಘಟಿತವಾಗಿ ಬದುಕುವ ಪ್ರಯತ್ನಗಳು, ಡಾಕ್ಟರ್‌ನ ಹೆಂಡತಿ, ಕಪ್ಪು ಕನ್ನಡಕದ ಹುಡುಗಿ, ಇವರ ವರ್ತನೆಯಲ್ಲಿ, ಎದ್ದು ಕಾಣುತ್ತದೆ” ಎಂದು ಹೇಳಿದ್ದಾರೆ. 

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books