ಕುವೆಂಪು ಕೆಲವು ಅಧ್ಯಯನಗಳು

Author : ಟಿ.ಪಿ. ಅಶೋಕ

Pages 136

₹ 90.00




Year of Publication: 2013
Published by: ಕಣ್ವ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್,

Synopsys

ಹಿರಿಯ ವಿಮರ್ಶಕ ಟಿ.ಪಿ. ಅಶೋಕ್ ಅವರು ಕುವೆಂಪು ಸಾಹಿತ್ಯ ಕುರಿತ ಬರೆದ ಲೇಖನಗಳ ಸಂಕಲನ. ಈ ಕೃತಿಯಲ್ಲಿ ಒಟ್ಟು ಎಂಟು ವಿಮರ್ಶಾ ಲೇಖನಗಳಿವೆ. ಲೇಖನಗಳ ಶೀರ್ಷಿಕೆ ಹೀಗಿದೆ- ನಾನು, ಹೋಗುವೆನು ನಾ, ಹೀರೆಯ ಹೂವು, ನನ್ನ ದೇವರು, ಧನ್ವಂತರಿಯ ಚಕಿತ್ಸೆ, ಕಾನೂನು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಕುವೆಂಪು ಮತ್ತು ಆಧುನಿಕತೆ. ಕುವೆಂಪು ಅವರ ಪ್ರಾತಿನಿಧಿಕ ಬಿಡಿ ಕೃತಿಗಳ ಆಳ ಮತ್ತು ಸೂಕ್ಷ್ಮ ಓದಿಗೆ ಈ ಪುಸ್ತಕ ಅನುವು ಮಾಡಿಕೊಡುತ್ತದೆ. ಟಿ.ಪಿ. ಅಶೋಕ ಅವರ ವಿಮರ್ಶಾ ಸ್ವರೂಪವನ್ನು ಈ ಪುಸ್ತಕ ಬಿಂಬಿಸುತ್ತದೆ. ಸರಳ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುವ ಭಾಷೆ ಪ್ರಿಯವಾಗುತ್ತದೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books