ಕುವೆಂಪು ಮತ್ತು...

Author : ಲಕ್ಷ್ಮಣ ಕೊಡಸೆ

Pages 138

₹ 80.00




Year of Publication: 2010
Published by: ಅನ್ನಪೂರ್ಣ ಪ್ರಕಾಶನ
Address: ಸಿರಿಗೇರಿ, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ.

Synopsys

ಕುವೆಂಪು, ಕೆ.ವಿ. ಸುಬ್ಬಣ್ಣ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ಎಂ.ಡಿ. ನಂಜುಂಡಸ್ವಾಮಿ, ಆರ್‌.ಸಿ. ಹಿರೇಮಠ, ಯು.ಆರ್‌. ಅನಂತಮೂರ್ತಿ ಕುರಿತ ಬರಹಗಳು ಈ ಕೃತಿಯಲ್ಲಿ ಗಮನಾರ್ಹವಾಗಿವೆ. ಕುವೆಂಪು ಕುರಿತ ಬರಹದಲ್ಲಿ ಕತೆಗಾರನಂತೆ ಕಟ್ಟಿಕೊಡುವ ಕೊಡಸೆ ಅವರು ಹಳ್ಳಿಗಾಡಿನ ಹುಡುಗನೊಬ್ಬನ ಕನಸು, ಸ್ವಾಭಾವಿಕ ಹಿಂಜರಿಕೆ ಇದರಲ್ಲಿದೆ. ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ನಿಲುವುಗಳ ಕುರಿತು ಲೇಖಕರು ಬರೆದಿದ್ದಾರೆ. ಸರಳ ಭಾಷಾ ಶೈಲಿಯಲ್ಲಿ ಆಳವಾದ ಅಧ್ಯಯನವಿರುವ ಕೃತಿ ಇದಾಗಿದೆ.

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books