ಕುವೆಂಪು ಸಾಹಿತ್ಯ ಲೋಕ-೧

Author : ಹ.ಕ. ರಾಜೇಗೌಡ

Pages 436

₹ 350.00




Year of Publication: 2016
Published by: ಸಿ.ವಿ.ಜಿ. ಪಬ್ಲಿಕೇಷನ್ಸ್
Address: 277, 5ನೇ ಅಡ್ಡರಸ್ತೆ, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು-560058

Synopsys

ಈ ಕೃತಿಯಲ್ಲಿ ಕುವೆಂಪು ಅವರ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿವಿಧ ಲೇಖಕರು ಬರೆದ ಲೇಖನಗಳು ಈ ಕೃತಿಯಲ್ಲಿವೆ. ಕುವೆಂಪು ಪ್ರಣಯ ಗೀತೆಗಳು: ಸೋಮಶೇಖರ, ಇಮ್ರಾಪುರ ಕುವೆಂಪು ಅಧ್ಯಾತ್ಮ ಗೀತೆಗಳು: ಗುಂಡ್ಮಿ ಚಂದ್ರಶೇಖರ ಐತಾಳ, ಕುವೆಂಪು ಪ್ರಕೃತಿ ಗೀತೆಗಳು: ಸುಧಾಕರ, ಕುವೆಂಪು ಕ್ರಾಂತಿ ಗೀತೆಗಳು: ಕಣವಿ ಮಹದೇವ, ಕುವೆಂಪು ನಾಡು ನುಡಿ ರಾಷ್ಟ್ರಪ್ರೇಮ ಗೀತೆಗಳು: ಡಿ.ಲಿಂಗಯ್ಯ, ಕುವೆಂಪು ನಾಟಕಗಳ ಛಂಧಸ್ಸು ಮತ್ತು ಶೈಲಿ: ಆರ್.ಎಲ್.ಅನಂತರಾಮಯ್ಯ, ಕುವೆಂಪು ನಾಟಕಗಳು ಮತ್ತು ರಂಗಭೂಮಿ: ಕ.ವೆಂ. ರಾಜಗೋಪಾಲ, ಕುವೆಂಪು ಅವರ ನಾಟಕಗಳು : ಅನುವಾದ ಹಾಗೂ ರೂಪಾಂತರ: ಪ್ರಧಾನ ಗುರುದತ್ತ, ಕುವೆಂಪು ಅವರ ಮಕ್ಕಳ ನಾಟಕಗಳು: ಡಾ.ಡಿ.ಕೆ.ರಾಜೇಂದ್ರ, ಕುವೆಂಪು ಅವರ ಕಾದಂಬರಿಗಳು: ಎಚ್. ತಿಪ್ಪೇರುದ್ರಸ್ವಾಮಿ, ಕುವೆಂಪು ಕಾದಂಬರಿಗಳ ಬಂಧ ಮತ್ತು ವಿನ್ಯಾಸ: ಡಾ.ಬಿ.ಎ.ವಿವೇಕ ರೈ, ಕುವೆಂಪು ಕಾದಂಬರಿಗಳಲ್ಲಿ ಮಲೆನಾಡ ಕನ್ನಡ: ಶ್ರೀಕಂಠ ಕೂಡಿಗೆ, ಶೂದ್ರ ತಪಸ್ವಿ-ಒಂದು ಅರ್ಥಪೂರ್ಣ ಮನಸೃಷ್ಟಿ: ಡಾ.ಜೀ.ಶಂ.ಪರಮಶಿವಯ್ಯ, ಕನ್ನಡ ಭಾಷೆಗೆ ಕುವೆಂಪು ಕೊಡುಗೆ: ಡಾ. ಸಿ. ಓಂಕಾರಪ್ಪ

About the Author

ಹ.ಕ. ರಾಜೇಗೌಡ

ಹ.ಕ. ರಾಜೇಗೌಡರು ಮೂಲತಃ ಮಂಡ್ಯ ನಾಗಮಂಗಲ ತಾಲ್ಲೂಕು ಹನುಮನಹಳ್ಳಿಯವರು. ಕೃಷಿಕ ಕುಟುಂಬದಲ್ಲಿ ಜನಿಸಿದ ರಾಜೇಗೌಡರು ನಾಡಿನ ಪ್ರಮುಖ ಸಂಶೋಧಕರಲ್ಲಿ ಒಬ್ಬರು. ಕನ್ನಡ (ಎಂ.ಎ) ಸ್ನಾತಕೋತ್ತರ ಪದವೀಧರರಾದ ಅವರು ಬೆಂಗಳೂರು, ಕನಕಪುರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿಭಾಗಕ್ಕೆ ಸೇರಿದರು. ರಾಷ್ಟ್ರಕವಿ ಕುವೆಂಪು, ದೇಜಗೌ, ಹಾ.ಮಾ.ನಾಯಕ ಅವರ ಪ್ರಭಾವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ತಮ್ಮ ಸಂಶೋಧನಾ ಕೃತಿಗಳ ಮೂಲಕ ಸಾಹಿತ್ಯಕ ವಲಯದಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ವಿಮರ್ಶಾ ಕೃತಿ ’ವಿವೇಚನೆ’ ಕಥಾಸಂಕಲನಗಳಾದ ’ಜಗ್ಗಿನ ಜನಪದ ಕಥೆಗಳು’,’ಮಳೆ ಹುಯ್ಯುತ್ತಿದೆ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books