ಲಾಲ್ ಬಹದ್ದೂರ್‍ ಶಾಸ್ತ್ರಿ

Author : ಅಡ್ಡೂರು ಕೃಷ್ಣರಾವ್

Pages 48

₹ 27.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: 11, ಎಂಬೆಸಿ ಸೆಂಟರ್‍, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು
Phone: 08022161900

Synopsys

ಲೇಖಕ ಅಡ್ಡೂರು ಕೃಷ್ಣರಾವ್ ಅವರ ಕೃತಿ-ಲಾಲ್ ಬಹದ್ದೂರ್ ಶಾಸ್ತ್ರಿ. ಭಾರತದ ಪ್ರಧಾನ ಮಂತ್ರಿಗಳ ಪೈಕಿ ಲಾಲ್ ಬಹದ್ದೂರ್ ಶಾಸ್ತ್ರಿಗಳ ಹೆಸರು ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಉತ್ತಮ ಆಡಳಿತ ನಿರ್ವಹಣೆಯ ಜಾಣ್ಮೆ, ಭಾರತೀಯ ಸಂಸ್ಕೃತಿಯನ್ನು ತಮ್ಮ ಜೀವಾಳವಾಗಿಸಿಕೊಂಡು ಅತ್ಯಂತ ಸರಳವಾಗಿ ಬದುಕಿನ ಶಾಸ್ತ್ರಿ, ಪಾಕಿಸ್ತಾನದೊಂದಿಗಿನ ಕೆಲ ವಿವಾದಾತ್ಮಕ ವಿಷಯಗಳ ಕುರಿತು ತಾಷ್ಕೆಂಟ್ ಗೆ ಹೋದಾಗ ಅಲ್ಲಿ ಹೃದಯಾಘಾತವಾಗಿ ನಿಧನ ಹೊಂದಿದರು. ಭಾರತದ ಮೊದಲ ಪ್ರಧಾನಿ ನೆಹರೂ ನಂತರ ಶಾಸ್ತ್ರಿಗಳೇ ಪ್ರಧಾನಿಯಾಗಿದ್ದು ಕೆಲವೇ ತಿಂಗಳ ಕಾಲ. ಆದರೂ, ಇವರ ಪ್ರಾಮಾಣಿಕ ವ್ಯಕ್ತಿತ್ವ, ಸರಳ ಜೀವನ, ಶುದ್ಧ ಆಡಳಿತದ ವೈಖರಿ ವಿಶ್ವದ ಗಮನ ಸೆಳೆದಿತ್ತು. ಇಂತಹ ಮಹನೀಯರ ಬದುಕು-ಸಾಧನೆ ಕುರಿತು ಲೇಖಕರು ವಿವರಿಸಿದ ಕೃತಿ ಇದು.

About the Author

ಅಡ್ಡೂರು ಕೃಷ್ಣರಾವ್

ಲೇಖಕ ಅಡ್ಡೂರು ಕೃಷ್ಣರಾವ್ ಅವರು ಸದ್ಯ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃಷಿ ಸಂಪದದ ಸಂಪಾದಕರು. ಸಾವಯವ ಕೃಷಿ ಬಳಗದ ಅಧ್ಯಕ್ಷರು. ದಿನಪತ್ರಿಕೆಯ ಅಂಕಣಕಾರರು. ಕೃಷಿ ತರಬೇತುದಾರರು. ಬ್ಯಾಂಕ್ ವ್ಯವಹಾರ ತಜ್ಞರು. ಗ್ರಾಹಕರ ವೇದಿಕೆ ಸಂಚಾಲಕರು.  ಕೃತಿಗಳು: ಮನರಂಜನೆಗಾಗಿ ಬೀಜಗಣಿತ (ಅನುವಾದಿತ ), ಎಂಬತ್ತರ ಕೊಯ್ಲಿನ ಕಾಳುಗಳು : ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ , ಹಸುರು ಹೆಜ್ಜೆ (ಅಂಕಣ ಬರಹ),  ಮ್ಯಾನುವಲ್ ಓನ್ ಬ್ಯಾಂಕಿಂಗ್  (ಸಂಪಾದಿತ ಕೃತಿ), ಇಂಗ್ಲಿಷ್ ಮೇಡ್ ಈಸೀ  (ಸಂಪಾದಿತ ಕೃತಿ), ಮೋಜಿನ ಗಣಿತ (ಮೂಲ:"ಫಿಗರ್ಸ್ ಫಾರ್ ಫನ್" ಇಂಗ್ಲಿಷ್),  ಜನಜಾಗೃತಿಯ ಸಾಧನ: ಮಾಹಿತಿ ಮಂಥನ,  ಬಳಕೆದಾರರ ಸಂಗಾತಿ,  ಟೂರಿಸ್ಟ್ ಗೈಡ್ - ದಕ್ಷಿಣ ಕನ್ನಡ, ಉಡುಪಿ, ಕೊಡಗು ಕಾಸರಗೋಡು ಜಿಲ್ಲೆಗಳು ...

READ MORE

Related Books