ಲಕ್ಷ್ಮೀ ರಂಗನಾಥನ ಚರಿತ್ರೆ

Author : ರಾ.ಹ.ಕೊಂಡಕೇರ

Pages 160

₹ 200.00




Year of Publication: 2021
Published by: ಕೊಂಡಕೇರ ಪ್ರಕಾಶನ
Address: ಕೊಂಡಕೇರ ಪ್ರಕಾಶನ, ಬಾವಲತ್ತಿ, ಬೀಳಗಿ - ತಾಲ್ಲೂಕು, ಬಾಗಲಕೋಟೆ-ಜೆಲ್ಲೆ
Phone: 9632734683

Synopsys

ಈ ಕೃತಿಯಲ್ಲಿ ಬಾವು ಗ್ರಾಮದ ಚರಿತ್ರೆ ದೇವಾಲಯದ ನಿರ್ಮಾಣ, ದೇವತಾರ್ಚನೆ, ಗರುಡಪಟ್ಟ (ಶ್ರೀ ಲಕ್ಷ್ಮೀ ರಂಗನಾಥನ ಕಲ್ಯಾಣ), ಸಮಾರಾಜ್ (ಸಮಾರಾಧನೆ), ಜಾತ್ರೆಯ ಮೊದಲನೆಯ ದಿನ ಶ್ರೀ ಲಕ್ಷ್ಮೀ ರಂಗನಾಥನ ರಥೋತ್ಸವ, ಜಾತ್ರೆಯ ಎರಡನೆಯ ದಿನ ಶ್ರೀ ಲಕ್ಷ್ಮೀ ರಂಗನಾಥನ ಓಕುಳಿ (ನೀರೋಕುಳಿ), ಜಾತ್ರೆಯ ಮೂರನೆಯ ದಿನ ಗುಡ್ಡದ ತಿಮ್ಮಯ್ಯನ ಪರಾವ, ದಿಂಡರಕಿ, ಊರಲ್ಲಿ ದೇವರು ಬರುವ ಪದ್ಧತಿ, ಶಾಸನಗಳು ಹಾಗೂ ಕುರುಹುಗಳು, ಶ್ರೀ ವಿಠಲ-ರುಕ್ಕಿಣಿ ದೇವಾಸ್ಥಾನ, ಶ್ರೀ ಸದ್ಗುರು ಪೂರ್ಣಾನಂದ ಆಶ್ರಮ, ಶ್ರೀ ಶ್ರದ್ಧಾನಂದ ಮಹಾಸ್ವಾಮಿಗಳು, ಶ್ರಾವಣ ಮಾಸದ ಕೊನ ಶುಕ್ರವಾರ ಗುಡ್ಡದ ತಿಮ್ಮಯ್ಯನ ಪರುಷ, ಶ್ರಾವಣ ಮಾಸದ ಕೊನೆ ಶನಿವಾರ ಶ್ರೀ ಲಕ್ಷ್ಮೀ ರಂಗನಾಥನ ಪರುಷ, ರಾವಣ ಮಾಸದ ಕೊನೆ ಸೋಮವಾರ ಆಣಿಸಿದ್ದಪನ ಪರುವ, ಬಾಬುದಾರರು, ಗ್ರಾಮದ ಇತರ ದೇವಸ್ಥಾನಗಳು, ಗ್ರಾಮದಲ್ಲಿನ ಪ್ರಮುಖ ಮನರಂಜನಾ ಚಟುವಟಿಕೆಗಳು, ಭೌಗೋಳಿಕ ಅಂಶಗಳನ್ನು ಇಲ್ಲಿ ದಾಖಲಿಸಿದ್ದಾರೆ. ಉದ್ಭವ ಮೂರ್ತಿ ರಂಗನಾಥನ ಜಾತ್ರೆ, ಇತಿಹಾಸ, ಕುರುಹುಗಳು, ಸಂಶೋಧನೆ, ಶಾಸನ, ವೀರಗಲ್ಲು, ಗುಹೆ ಸೇರಿದಂತೆ ಶ್ರೀ ರಂಗನ ಸ್ಥಳದಲ್ಲಿನ ವಿಶಿಷ್ಟ ಆಚರಣೆಗಳು, ಪದ್ಧತಿಗಳ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ, ಇತಿಹಾಸ ವಿದ್ಯಾರ್ಥಿಗಳಿಗೆ ಆಕರ ಗ್ರಂಥವಾಗಿ ಹೊರ ಹೊಮ್ಮಿದೆ. ಸತತ ಅಧ್ಯಯನ, ನಿರಂತರ ಸಂಶೋಧನೆ ಫಲವಾಗಿ ರಾ.ಹ. ಕೊಂಡಕೇರ ಈ ಗ್ರಂಥವನ್ನು ಅನಾವರಣಗೊಳಿಸಿದ್ದಾರೆ ಟಿ.ಕುಲಕರ್ಣಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ರಾ.ಹ.ಕೊಂಡಕೇರ

ಕವಿ ,ಲೇಖಕ ರಾ.ಹ.ಕೊಂಡಕೇರ(ರಾಮಪ್ಪ ಹಣಮಪ್ಪ ಕೊಂಡಕೇರ) ತಂದೆ ಹಣಮಪ್ಪ ,ತಾಯಿ ರಂಗವ್ವ . ಇವರು 8-6-1988 ರಂದು ಜನಿಸಿದರು.ಮೂಲತಃ ಇವರು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾವಲತ್ತಿ ಎಂಬ ಗ್ರಾಮದವರು. ಪ್ರಸ್ತುತ ಇವರು ಧಾರವಾಡದಲ್ಲಿ ರೈಲ್ವೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಡು ಹಲವಾರು ಮೌಲಿಕ ಕೃತಿಗಳನ್ನೂ ಹೊರತಂದಿದ್ದಾರೆ. ನಾಟಕ ರಚನೆ ಅಭಿನಯದ ಜೊತೆಗೆ ಒಳ್ಳೆಯ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.  ಕೃತಿಗಳು : ಹಕ್ಕಿ ಚುಕ್ಕಿ,ಮನದ ಮಾತು(ಹನಿಗವಿತೆಗಳು),ಶ್ರೀ ಲಕ್ಷ್ಮೀ ರಂಗನಾಥನ ಚರಿತ್ರೆ (ಸಂಶೋಧನಾ ಗ್ರಂಥ),ಮೆಟ್ಟಿನ ಪದಗಳು(ಸಂಪಾದಿತ ಕೃತಿ)ಇವು ಪ್ರಕಟಣೆಗೊಂಡಿವೆ. ಶ್ರೀರಂಗನ ಮಹಿಮೆ,ಹಲಗಲಿಯ ಬೇಡರು,ಸರಕಾರಿ ಶಾಲೆ(ನಾಟಕಗಳು) ...

READ MORE

Related Books