ಲಯವೂ ಅದರ ಪರಿವಾರವೂ

Author : ಜಿ. ಎಸ್. ಸಿದ್ಧಲಿಂಗಯ್ಯ

Pages 260

₹ 80.00




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯು ಪ್ರಧಾನವಾಗಿ 'ಲಯ'ವನ್ನು ಕುರಿತಿದೆ. ಲಯವು ಛಂದಸ್ಸಿನ ಚರಿತ್ರೆಯಲ್ಲಿ ವಹಿಸಿರುವ ಪಾತ್ರವನ್ನು ಮತ್ತು ಅದರ ಮಹತ್ವವನ್ನು ನೂರಾರು ಉದಾಹರಣೆಗಳ ಮೂಲಕ ಈ ಕೃತಿಯು ನಮ್ಮ ಮುಂದಿರಿಸಿದೆ. ಲಯದ ವಿಶ್ವವಿಸ್ತಾರವನ್ನು ತೋರಿಸುವ ಮೊತ್ತಮೊದಲ ಕೃತಿ ಇದಾಗಿದೆ. ಕವಿತೆಯ ತಾಣ 'ಲಯ'. ಕೃತಿಯು ಒಂದು ಸಾವಧಾನದ ರಚನೆ ಆಗಿರುವುದು ಇದೇ ಕಾರಣಕ್ಕೆ, ಆಚಾರ್ಯ ಬಿ.ಎಂ.ಶ್ರೀಯವರು ತೋರಿಸಿಕೊಟ್ಟ ಸೂತ್ರರೂಪಿ ಮಾತುಗಳನ್ನು ಇಲ್ಲಿ ನಿರೂಪಿಸಲಾಗಿದೆ. ಈ ಸಂಕಲನವು ಒಳಗೊಂಡಿರುವ ಅಧ್ಯಾಯಗಳು ಹೀಗಿವೆ: ಲಯ ,ಛಂದಸ್ಸು , ಗುರು ಲಘುಗಳು, ಗಣ; ಯತಿ , ಛಂದಸ್ಸು ಅದರ ನಿಯಮ ಹಾಗೂ ಸ್ವಾತಂತ್ರ್ಯ , ಮಾತ್ರಾಗಣಗಳತ್ತ ಇತರ ಗಮಗಳು ,ಕುಮಾರವ್ಯಾಸನ ಸಾಧನೆ ಭಾಮಿನಿ ಷಟ್ನದಿಯಲ್ಲಿ , ಷಟ್ಟದಿ ಛಂದಸ್ಸಿನಲ್ಲಿ ಲಕ್ಷ್ಮೀಶ ಕವಿಯ ಸಾಧನೆ , ನವೋದಯ ಕಾಲದ ಛಂದಸ್ಸು , ಛಂದಸ್ಸು : ನವ್ಯಕಾವ್ಯದಲ್ಲಿ

About the Author

ಜಿ. ಎಸ್. ಸಿದ್ಧಲಿಂಗಯ್ಯ
(20 February 1931)

ಕನ್ನಡ ಸಾಹಿತ್ಯ ಪರಿಷತ್ತಿನ 17ನೇ (1988-1992) ಅಧ್ಯಕ್ಷರಾಗಿದ್ದ ಜಿ.ಎಸ್.ಸಿದ್ಧಲಿಂಗಯ್ಯ, ವಚನ ಸಾಹಿತ್ಯ ವಿದ್ವಾಂಸರು, ಶಿಕ್ಷಣ ತಜ್ಞರು, ಕವಿಗಳು ಆಗಿದ್ದರು. ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ 1931 ರ ಫೆ. 20 ರಂದು ಜನನ.  ಮೈಸೂರು ವಿ.ವಿ. ಮಹಾರಾಜ ಕಾಲೇಜಿನಿಂದ ಬಿ.ಎ. ಮೈಸೂರು ವಿ.ವಿ.ಯಿಂದ 1961ರಲ್ಲಿ ಎಂ.ಎ. ಪದವೀಧರರು. ಸರ್ಕಾರಿ ಕಾಲೇಜಿನ ಅಧ್ಯಾಪಕ-ಪ್ರಾಧ್ಯಾಪಕ-ಪ್ರಾಂಶುಪಾಲರಾಗಿ ನಂತರ 1988 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. ವಿಮರ್ಶೆ : ಮಹಾನುಭಾವ ಬುದ್ಧ, ಕವಿ ಲಕ್ಷ್ಮೀಶ, ಚಾಮರಸ, ಹೊಸಗನ್ನಡ ಕಾವ್ಯ, ಕವನ ಸಂಕಲನ : ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಹಾಗೂ ಸಂಪಾದನೆ ...

READ MORE

Related Books