ಲಿಂಗಾಯತ ಅಧ್ಯಯನ ಸಂಸ್ಥೆ ಮತ್ತು ಡಾ.ಎಂ.ಎಂ.ಕಲಬುರ್ಗಿ

Author : ಪ್ರಕಾಶ ಗಿರಿಮಲ್ಲನವರ

Pages 132

₹ 60.00




Year of Publication: 2016
Published by: ಲಿಂಗಾಯತ ಅಧ್ಯಯನ ಸಂಸ್ಥೆ
Address: ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ. ಎಡೆಯೂರು, ಡಂಬಳ-ಗದಗ

Synopsys

ಅದು 1965. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಪೀಠಾರೋಹಣ ಮಾಡಿದ್ದ ಹೊಸದಿನಗಳು. ಆಗ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ ಲಿಂಗಾಯತ ಅಧ್ಯಯನ ಸಂಸ್ಥೆ ರೂಪುಗೊಂಡಿತು. ಅಂದಿನಿಂದಲೂ ಸಂಸ್ಥೆಯ ಪ್ರಸಾರಂಗದ ಹೊಣೆ ಹೊತ್ತವರು ಕಲಬುರ್ಗಿ. ಅಪ್ರಕಟಿತ ಲಿಂಗಾಯತ ಸಾಹಿತ್ಯ, ಶರಣರ ಸಾಹಿತ್ಯ ಮಾಲೆ ಮುಂತಾದ ಯೋಜನೆಗಳ ಮೂಲಕ ಸಂಸ್ಥೆಯನ್ನು ಅವರು ಕಟ್ಟಿಬೆಳೆಸಿದ ರೀತಿ ಅನನ್ಯ. ಸಿದ್ದಲಿಂಗ ಸ್ವಾಮೀಜಿ ಮತ್ತು ಕಲಬುರ್ಗಿ ಅವರು ಈ ಸಂಸ್ಥೆಗಾಗಿ ಜೋಡಿ ಎತ್ತುಗಳಂತೆ ದುಡಿದವರು.  

ಕಲಬುರ್ಗಿ ಅವರು ಸಂಸ್ಥೆಯೊಂದಿಗೆ ಹೊಂದಿದ್ದ ನಂಟನ್ನು ಹಲವು ರೀತಿಯಲ್ಲಿ ವಿಷದ ಪಡಿಸುತ್ತದೆ ಕೃತಿ. ಪ್ರಕಾಶ ಗಿರಿಮಲ್ಲನವರ ಈ ಕೃತಿಯ ಲೇಖಕರು.

About the Author

ಪ್ರಕಾಶ ಗಿರಿಮಲ್ಲನವರ
(24 August 1980)

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಬಡ ಕೃಷಿಕ ಕುಟುಂಬದಲ್ಲಿ  (ಜನನ : 28-4-1980) ಜನಿಸಿದ ಪ್ರಕಾಶ ಗಿರಿಮಲ್ಲನವರ ಶರಣ ಸಾಹಿತ್ಯ, ಸಂಸ್ಕೃತಿ ಪರಿಸರದಲ್ಲಿ ಬೆಳೆದು ಬಂದ ಒಬ್ಬ ಭರವಸೆಯ ಯುವ ಬರಹಗಾರ.  ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳವರು ಸ್ಥಾಪಿಸಿದ ಉಚಿತ ಪ್ರಸಾದ ನಿಲಯದಲ್ಲಿ ಆಶ್ರಯ ಪಡೆದು ಬೆಳೆದವರು. ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ’ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ (ವಚನ ಅಧ್ಯಯನ ಕೇಂದ್ರ)ದಲ್ಲಿ 20 ವರ್ಷಗಳ ಕಾಲ ಗ್ರಂಥಾಲಯ ಸಹಾಯಕರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇದುವರೆಗೂ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books