ಲೋಕ ವಿರೋಧಿಗಳ ಜತೆಯಲ್ಲಿ

Author : ರಹಮತ್ ತರೀಕೆರೆ

Pages 302

₹ 200.00




Year of Publication: 2006
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040

Synopsys

ಸಂಸ್ಕೃತಿ ಚಿಂತಕ, ಲೇಖಕ ರಹಮತ್ ತರೀಕೆರೆ ಅವರು ಕನ್ನಡ-ಕರ್ನಾಟಕದ 15 ವಿಭಿನ್ನ, ವಿಶಿಷ್ಟ ಮತ್ತು ಅನನ್ಯ ಮನಸ್ಸುಗಳೊಂದಿಗೆ ಮುಖಾಮುಖಿಯಾಗಿ ನಡೆಸಿದ ಮಾತುಕತೆ ಸಂಗ್ರಹ ಈ ಪುಸ್ತಕ. ಮಾತುಕತೆಯು ಕೇವಲ ಹರಟೆ-ಚರ್ಚೆಗೆ ಸೀಮಿತವಾದುದಲ್ಲ, ಗಂಭೀರ ಜಿಜ್ಞಾಸೆ, ಲೋಕಜ್ಞಾನದ ಅರಿವಿನ ವಿಸ್ತರಣೆ ಇದೆ. ಶೀರ್ಷಿಕೆಯಲ್ಲಿ ಲೋಕವಿರೋಧಿಗಳು ಎಂದು ಮಾತನಾಡಿಸಿದವರನ್ನು ಕರೆದಿರುವರಾದರೂ ಅದು ಧ್ವನ್ಯಾರ್ಥ. ಜೀವಪರ-ಜನಪರ ಕಾಳಜಿಯಿಂದ ಕೆಲಸ ಮಾಡಿದ- ಚಿಂತಿಸಿದ ವ್ಯಕ್ತಿಗಳ ವ್ಯಕ್ತಿತ್ವವನ್ನು ಅನಾವರಣ ಮಾಡಲಾಗಿದೆ. ಸಾಂಸ್ಕೃತಿಕ- ಸಾಹಿತ್ಯಕ ಸಂದರ್ಶನ ಹೇಗಿರಬೇಕು ಎನ್ನುವುದಕ್ಕೆ ಈ ಬರಹಗಳನ್ನು ನೋಡಬಹುದು. ಪತ್ರಿಕೆಗಳಿಗಾಗಿ ಸಂದರ್ಶನ ಮಾಡಿದಾಗ ಇರುವ ಪದಮಿತಿ ಇಲ್ಲದೇ ಇರುವುದರಿಂದ ಸಂದರ್ಶನ ಸಮಗ್ರವಾಗಿ ಕಾಣಿಸುತ್ತವೆ. ಎಂ.ಡಿ. ನಂಜುಂಡಸ್ವಾಮಿ, ದೇವನೂರ ಮಹಾದೇವ, ಶಂಕರ ಮೊಕಾಶಿ ಪುಣೇಕರ, ಕೆ. ರಾಘವೇಂದ್ರರಾವ್, ಎಲ್. ಬಸವರಾಜು, ಎಚ್. ಗಣಪತಿಯಪ್ಪ, ಎ.ಎನ್. ಮೂರ್ತಿರಾವ್, ಚೆನ್ನವೀರ ಕಣವಿ, ಜಿ.ಎಚ್. ನಾಯಕ, ಕಡಿದಾಳು ಶಾಮಣ್ಣ ಕೆ.ಎಸ್. ನಿಸಾರ್ ಅಹಮದ್, ಸಾರಾ ಅಬೂಬಕರ್, ಮುದೇನೂರ ಸಂಗಣ್ಣ, ನೀಲಗಂಗಯ್ಯ ಪೂಜಾರ, ಷ.ಶೆಟ್ಟರ್ ಅವರ ಜೊತೆಗಿನ ಮಾತುಕತೆ- ಸಂದರ್ಶನ ಈ ಗ್ರಂಥದಲ್ಲಿವೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books