ಲೋಕಸಿರಿ

Author : ಕುರುವ ಬಸವರಾಜ್

Pages 128

₹ 110.00




Year of Publication: 2020
Published by: ಕರ್ನಾಟಕ ಜಾನಪದ ಪರಿಷತ್
Address: ಜಾನಪದ ಸಿರಿಭುವನ(ಕೇಂದ್ರ ಕಛೇರಿ), ನಂ.1, ಜಲದರ್ಶಿನಿ ಬಡಾವಣೆ, ಎಂ.ಎಸ್. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ನ್ಯೂ ಬಿ.ಇ.ಎಲ್. ರಸ್ತೆ, ಬೆಂಗಳೂರು- 560054

Synopsys

‘ಲೋಕಸಿರಿ’ ತಿಂಗಳ ಅತಿಥಿ ಕಲಾವಿದರು ಡಾ. ಕುರುವ ಬಸವರಾಜ್ ಅವರ ಕೃತಿ. ಇಲ್ಲಿ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಾಡಿನ ಬಹುಮುಖ್ಯ ಜನಪದ ಕಲಾವಿದರ ಕುರಿತಾದ ಬರಹಗಳಿವೆ. ನಾಡಿನ ಈ ಕಾಲಘಟ್ಟದ ಜಾನಪದ ಲೋಕದ ಸಿರಿಗಳು ಇವರು. ಪರಂಪರೆಯಿಂದ ಹೊತ್ತು ತಂದ ಕಲೆಯ ಸೊಗಸು ಸೊಗಡುಗಳ ಗಟ್ಟಿಯಾಗಿ ತಬ್ಬಿಕೊಂಡವರು. ತಮ್ಮದೇ ನೆಲೆಯಲ್ಲಿಲ ವಿಸ್ತರಿಸಿದವರು. ಜಾನಪದ ನೆಲದ ಸಮೃದ್ಧಿ ಬೆಳೆ ಇವರು. ಯಾರೂ ಹೆಮ್ಮೆ ಪಡುವಂತಹ ಪ್ರತಿಭೆಗಳ ಸ್ಥೂಲ ಪರಿಚಯ ಈ ಕೃತಿಯದು. ಇವರೆಲ್ಲ ಜಾನಪದ ಲೋಕದಲ್ಲಿ ತಿಂಗಳಿಗೊಬ್ಬರಂತೆ ಬಂದು ಗೌರವ ಸ್ವೀಕರಿಸಿ, ಪ್ರತಿಭೆ ಝಲಕ್ ಪ್ರದರ್ಶಿಸಿ, ತಮ್ಮ ಅನುಭವದ ಸಾರವ ಹರಿಸಿದರು. ಯಾರೂ ಹೆಮ್ಮೆ ಪಡುವಂತವರ ಕುರಿತಾದ ಬರಹಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.

About the Author

ಕುರುವ ಬಸವರಾಜ್

ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...

READ MORE

Related Books