ಲೋಕಾಯತ ಮತ್ತು ಶೈವ ಭಾಗ -೨

Author : ಬಸವರಾಜ್ ತೂಲಹಳ್ಳಿ

Pages 572

₹ 450.00




Year of Publication: 2013
Published by: ನಿವೇದಿತ ಪ್ರಕಾಶನ
Address: ನಂ. 3437, 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀ ನಗರ, ಬನಶಂಕರಿ 2ನೇ ಹಂತ, ಬೆಂಗಳೂರು -28
Phone: 8050 917296

Synopsys

ಲೋಕಾಯತ ಮತ್ತು ಶೈವ ಭಾಗ -೨ ಕೃತಿಯಲ್ಲಿ ತಂತ್ರದ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಲಾಗಿದೆ. ತಂತ್ರಗಳು ವೇದವಿರೋಧಿಗಳು. ಮೂಲತಃ ಕೃಷಿ ಪದ್ಧತಿಯೊಂದಿಗೆ ಸಂಬಂಧ ಹೊಂದಿದ್ದ ತಂತ್ರವು ಮುಂದೆ ಹೇಗೆ ಮತ್ತು ಯಾಕೆ ಸಂಬಂಧ ಸಾಧಿಸಿದವು ಎಂಬುದು ಚರ್ಚಿಸಲಾಗಿದೆ.

ಇಂದಿಗೂ ಕರ್ನಾಟಕದ ಅನೇಕ ಜನಪದ ಸಂಪ್ರದಾಯಗಳಲ್ಲಿ ತಾಂತ್ರಿಕ ಅನ್ನಬಹುದಾದ ಅನೇಕ ಅಂಶಗಳು  ಮತ್ತು ಅವು ಕೃಷಿಕೇಂದ್ರಿತವಾಗಿರುವ ಬಗ್ಗೆ ತಿಳಿಸುತ್ತವೆ.  

ಜನಪದರು ಕೃಷಿಭೂಮಿಯನ್ನು ಸ್ತ್ರೀ ಎಂದು ಭಾವಿಸಿದ್ದಾರೆ.  ಸಮಾಜ, ಆದಿಮ ಸಮಾಜಗಳಲ್ಲಿ ತಾಯಿ ಏಕೆ ಮುಖ್ಯಳಾದಳು, ಕೃಷಿ-ತಂತ್ರ-ಮಹಿಳೆ ಭಾಗಗಳಲ್ಲಿ ಈ ಕುರಿತು ವಿವರಗಳನ್ನು ನೀಡಲಾಗಿದೆ.

ದಲಿತ ಹಾಗೂ ಶಾಕ್ತಾಚರಣೆಗಳು, ನಡೆದ ವಾದಗಳನ್ನು ಜನಮುಖಿಯಾಗಿಸುವ ನಿಟ್ಟಿನಲ್ಲಿ ಕೃತಿಯು ಹೊಸ ಆಯಾಮವನ್ನು ಪಡೆದುಕೊಂಡಿದೆ. ವಿಸ್ತಾರವಾದ ಓದು, ತರ್ಕಬದ್ಧ ವಾದಮಂಡನೆ, ವರ್ತಮಾನದ ಜಾನಪದ ಮಾಹಿತಿಗಳನ್ನು ಪರಂಪರೆಗೆ ಜೋಡಿಸಿ ಹೊಸ ಅರ್ಥ ಹೊರಡಿಸುವ ವಿಧಾನ-ಇವುಗಳಿಂದಾಗಿ ಈ ಕೃತಿಯು ಶಾಕ್ತ ಮತ್ತು ಶೈವ ಪರಂಪರೆಯನ್ನು ಪರಿಚಯಿಸುವಲ್ಲಿ ಪ್ರಮುಖವಾಗಿದೆ.

 

 

About the Author

ಬಸವರಾಜ್ ತೂಲಹಳ್ಳಿ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ತೂಲಹಳ್ಳಿಯಲ್ಲಿ 1962 ರಲ್ಲಿ ಜನಿಸಿದರು. ಉಪಜೀವನಕ್ಕೆ ಕಿರಾಣಿ ಅಂಗಡಿ ನಿರ್ವಹಣೆಯ ಜತೆಗೇ ಮೈಸೂರು ವಿಶ್ವವಿದ್ಯಾಲಯದಿಂದ ’ಐ.ಸಿ.ಸಿ ಅಂಡ್ ಸಿ.ಇ’ ಮೂಲಕ ಪದವಿ ನಂತರ 1992 ರಲ್ಲಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ. 1992 ರಿಂದ ದಾವಣಗೆರೆ, ಹರಪನಹಳ್ಳಿ, ಕೊಟ್ಟೂರುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 1996ರಲ್ಲಿ ಡಿಸೆಂಬರ್‍ ನಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಆಂಗ್ಲಭಾಷಾ ಉಪನ್ಯಾಸಕರಾಗಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಿಂದ ನೇಮಕಗೊಂಡರು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಹರಿಹರದ ದ.ರಾ.ಮ ಸರಕಾರೀ ...

READ MORE

Related Books