ಮ. ನವೀನಚಂದ್ರ ಪಾಲ್‌

Author : ಶ್ರೀರಾಮ ದಿವಾಣ

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 248ನೇ ಕೃತಿಯಿದು. ಸಮಾಜವಾದಿ ಪತ್ರಕರ್ತ, 'ಸಂಗಾತಿ'ಯ ಮ. ನವೀನಚಂದ್ರ ಪಾಲ್ ಅವರ ಜೀವನ-ಸಾಧನೆಯನ್ನು ಕಟ್ಟಿಕೊಡುತ್ತದೆ. ಕಥೆ, ಕವನ, ಸಾಹಿತ್ಯದ ಸುತ್ತವೇ ಸುತ್ತುತ್ತಿದ್ದ ಕನ್ನಡ ಪತ್ರಿಕೋದ್ಯಮಕ್ಕೆ ಜನಪರ ಧ್ವನಿಯಾದ 'ಸಂಗಾತಿ'ಯ ಮೂಲಕ ಹೊಸ ರೂಪು ನೀಡಿದವರು ಮ. ನವೀನಚಂದ್ರ ಪಾಲ್. ನಿರಂತರ ತನಿಖಾ ವರದಿಗಳನ್ನು ಪ್ರಕಟಿಸಿ ಆಡಳಿತದ ಚಳಿ ಬಿಡಿಸಿದ ಧೀಮಂತ ಪತ್ರಕರ್ತ, ರಂಗಭೂಮಿ ಕಲಾವಿದ, ಗಾಯಕ, ಮಾನವ ಪ್ರೇಮಿ, ಸಹೃದಯಿ. ನವೀನಚಂದ್ರರು ಹುಟ್ಟುಹಾಕಿದ, ರೂಪಿಸಿದ ಸಂಗಾತಿಯನ್ನು ಮೆಚ್ಚದವರೇ ಇಲ್ಲ. ಸಾಮಾನ್ಯ ಓದುಗರಿಂದ ಹಿಡಿದು ಲೇಖಕರವರೆಗೆ ಒಂದಲ್ಲ ಒಂದು ಕಾರಣಕ್ಕೆ ಎಲ್ಲರೂ ಸಂಗಾತಿಯನ್ನು ಮೆಚ್ಚುವವರೇ. ನವೀನಚಂದ್ರ ಪಾಲರ ಸಾಗರದಂಥ ವ್ಯಕ್ತಿತ್ವವನ್ನು ಈ ಕೃತಿ ಕಟ್ಟಿಕೊಡುತ್ತದೆ.

About the Author

ಶ್ರೀರಾಮ ದಿವಾಣ

ಶ್ರೀರಾಮ ದಿವಾಣರು (ಜನನ 1974) ಶಾಲಾ ದಿನಗಳಿಂದಲೇ ಸಾಹಿತ್ಯದ ಪ್ರೀತಿ ಬೆಳೆಸಿಕೊಂಡದವರು. ಸ್ವತಃ ಕವಿತೆ, ಚುಟುಕು, ಲೇಖನಗಳನ್ನು ಬರೆಯುತಿದ್ದ ಶ್ರೀರಾಮ ದಿವಾಣರು 'ಕಾಸರಗೋಡು ದರ್ಪಣ’ ಎಂಬ ಸಾಹಿತ್ಯಕ ಮಾಸ ಪತ್ರಿಕೆಯನ್ನು ಸಂಪಾದಕ ಪ್ರಕಾಶಕರಾಗಿ ಗಣಪತಿ ದಿವಾಣ ಹಾಗೂ ಅಣ್ಣ ರವಿರಾಜ ದಿವಾಣ ಇವರ ಸಹಕಾರದಿಂದ ಕೆಲವು ಕಾಲ ನಡೆಸಿದ್ದರು. ನಂತರ ಪೂರ್ಣಾವಧಿ ಪತ್ರಿಕಾ ವರದಿಗಾರರಾಗಿ ವಿವಿಧ ಪತ್ರಿಕೆಗಳಲ್ಲಿ ದುಡಿದರಲ್ಲದೆ, 'ಕರಾವಳಿ ರಿಪೋರ್ಟರ್' ಎಂಬ ಪತ್ರಿಕೆಯನ್ನೂ ನಡೆಸಿದ್ದುಂಟು. ಉಡುಪಿಯಲ್ಲಿ ಕೇಬಲ್ ಟಿವಿ ನ್ಯೂಸ್ ಛಾನೆಲ್ (ಉಡುಪಿ ವಾರ್ತೆ) ಆರಂಭಿಸಿದ್ದು ಅವರ ಹೆಗ್ಗಳಿಕೆ. ವಿವಿಧ ಪ್ರಗತಿಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ದಿವಾಣರು ...

READ MORE

Related Books