ಮಾಧ್ಯಮ-ಮಾರ್ಗ

Author : ಎನ್. ಮನು ಚಕ್ರವರ್ತಿ

Pages 528

₹ 350.00




Year of Publication: 2010
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಸಾಹಿತ್ಯ, ಸಿನೆಮಾ ಮತ್ತು ಸಂಗೀತ -- ಈ ಮೂರು ಮಾಧ್ಯಮಗಳನ್ನು ಮಾರ್ಗವಾಗಿಟ್ಟುಕೊಂಡು ಮನು ಚಕ್ರವರ್ತಿಯವರ ಈ ಪುಸ್ತಕವು ಇವತ್ತಿನ ಕಾಲದ ಪ್ರಮುಖ ಸಾಮಾಜಿಕ ಮತ್ತು ಸಾಂಸ್ಕ ತಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತದೆ.ಮುಖ್ಯವಾಗಿ, ಮೂರು ರೀತಿಯ ವೈಶಿಷ್ಟ ಗಳು ಮನು ಅವರ ಇಲ್ಲಿಯ ಬರಹಗಳಲ್ಲಿ ಎದ್ದುಕಾಣುತ್ತವೆ -- ಒಂದು, ತಾನು ಎತ್ತಿಕೊಂಡ ಪ್ರತಿಯೊಂದು ವಿಚಾರವನ್ನೂ ತಳಮಟ್ಟ ಶೋಧಿಸಿ, ಚಪ್ಪಟೆಗೊಳಿಸದೆ ವೈರುದ್ಧ ಗಳೊಡನೆಯೇ ಪ್ರಸ್ತುತಗೊಳಿಸುವ ಚಿಕಿತ್ಸಕ ಪ್ರಜ್ಞೆ; ಎರಡು, ಪ್ರತಿಯೊಂದು ನಿರ್ದಿಷ್ಟ ವಿಚಾರವನ್ನೂ ವಿಶಾಲ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯೊಡನೆ ಸಮೀಕರಿಸಿ ವಿಶ್ಲೇಷಿಸುವ ಸಂದರ್ಭಪ್ರಜ್ಞೆ; ಮತ್ತು ಮೂರನೆಯದಾಗಿ, ತಾನು ಈ ವಿಚಾರವನ್ನು ಕುರಿತಾಗಿ ಇವತ್ತಿನ ಈ ಕಾಲದೇಶಗಳಲ್ಲಿ ಯಾತಕ್ಕೆ ಬರೆಯುತ್ತಿದ್ದೇನೆ ಎಂಬಂಥ ಸ್ಪಷ್ಟವಾದೊಂದು ವೈಯಕ್ತಿಕ ಪ್ರಜ್ಞೆ -- ಇಂಥ ಮೂರು ಪ್ರಜ್ಞಾಪ್ರವಾಹಗಳ ಮುಪ್ಪುರಿ ಇಲ್ಲಿಯ ಲೇಖನಗಳಲ್ಲಿದೆ.ಆದ್ದರಿಂದಲೇ, ಇಲ್ಲಿಯ ಪ್ರತಿಯೊಂದು ಲೇಖನವೂ ನಿರ್ದಿಷ್ಟ ಕೃತಿ-ಘಟನೆ-ಮಾಧ್ಯಮಗಳನ್ನು ಕೇಂದ್ರೀಕರಿಸಿದ್ದರೂ ಅಂತಿಮವಾಗಿ ಇಲ್ಲಿರುವ ಎಲ್ಲ ಬರಹಗಳೂ ‘ಮರಳ ಕಣದಲ್ಲಿಯೇ ವಿಶ್ವವನ್ನು ಕಾಣುವ ಮತ್ತು ಅಂಗೈಯೊಳಗೆ ಅನಂತವನ್ನು ಆವಾಹಿಸಿಕೊಳ್ಳುವ’ ಮಹತ್ವಾಕಾಂಕ್ಷೆಯನ್ನು ಪ್ರಕಟಪಡಿಸುವಂತಿವೆ. -ಅಕ್ಷರ ಕೆ.ವಿ.

About the Author

ಎನ್. ಮನು ಚಕ್ರವರ್ತಿ

ಶಿಕ್ಷಕರಾಗಿ, ಸಾಹಿತ್ಯ ಸಂಸ್ಕೃತಿ ಮತ್ತು ಸಿನಿಮಾ ವಿಮರ್ಶಕರಾಗಿ, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಮುಖರು ಎನ್. ಮನು ಚಕ್ರವರ್ತಿ. ಬೆಂಗಳೂರಿನ ಎನ್.ಎಮ್.ಕೆ.ಆರ್.ವಿ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಎನ್. ಮನು ಚಕ್ರವರ್ತಿ ಅವರು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಗಣ್ಯ ವಿಮರ್ಶಕರು ಹೌದು. ಅನೇಕ ಚಲನಚಿತ್ರ ರಸಗ್ರಹಣ ಶಿಬಿರಗಳನ್ನು ನಡೆಸಿದ್ದು ಪ್ರಬಂಧಗಳನ್ನು ಮಂಡಿಸಿ, ಸಂವಾದ ನಡೆಸಿದ್ದಾರೆ. 'ಕಲ್ಯರಿಂಗ್ ರಿಯಲಿಸಂ', 'ಪ್ರೇಮಿಂಗ್ ದಿ ನೂ ವೇವ್ (ಕನ್ನಡದ ಶ್ರೇಷ್ಠ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ಕುರಿತ ಪುಸ್ತಕ)', 'ಭಾರತೀಯ ಸ್ತ್ರೀವಾದ' ಅವರ ಪ್ರಕಟಣೆ ಕಂಡ ಕೃತಿಗಳು. ಸಮಾಜ-ಸಂಸ್ಕತಿ-ಸಾಹಿತ್ಯ-ಕಲೆಗಳನ್ನು ಕುರಿತು ಅವರು ಬರೆದ ಚಿಂತನಾ ಬರೆಹಗಳು ‘ಮಾಧ್ಯಮ-ಮಾರ್ಗ’. ಕನ್ನಡದ ಪ್ರಮುಖ ಕೃತಿಗಳಲ್ಲಿ ...

READ MORE

Related Books