ಮಾಸ್ತಿಯವರ ನಾಟಕಗಳು

Author : ಜಿ.ಎನ್. ರಂಗನಾಥ ರಾವ್

Pages 160

₹ 40.00




Year of Publication: 1999
Published by: ಪ್ರಸರಾಂಗ
Address: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು- 560 056

Synopsys

ಲೇಖಕ ಎಚ್.ಕೆ. ರಂಗನಾಥ ರಾವ್‌ ಅವರ ಕೃತಿ ʻಮಾಸ್ತಿಯವರ ನಾಟಕಗಳುʼ. ಕನ್ನಡದ ಆಸ್ತಿ ಎಂದೇ ಪರಿಗಣಿತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು ಇಲ್ಲಿಯವರೆಗೆ ಬರೆದ ನಾಟಕಗಳ ಬಗ್ಗೆ ಈ ಕೃತಿಯು ಚರ್ಚಿಸುತ್ತದೆ. ಇಲ್ಲಿಯವರೆಗೆ ಮಾಸ್ತಿ ಅವರು ಹದಿಮೂರು ಸ್ವಂತ ನಾಟಕಗಳನ್ನು ಬರೆದಿದ್ದಾರೆ. ಬೇರೆ ಭಾಷೆಗಳಿಂದ ಎಂಟು ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ಧಾರೆ ಎನ್ನುವ ಮಾಹಿತಿಗಳನ್ನು ನೀಡುತ್ತಾ ರಂಗನಾಥ ರಾವ್‌ ಅವರು ಕೃತಿಯನ್ನು ಶುರುಮಾಡುತ್ತಾರೆ. ಮಾಸ್ತಿ ಅವರ ಸಾಹಿತ್ಯ ಬರಹ, 1933-38ರ ಅವಧಿಯಲ್ಲಿ ಬರೆದ ಮೊದಲ ನಾಟಕಗಳು, ಅವುಗಳ ವಿಶೇಷತೆ, ಆರಿಸಿಕೊಂಡ ವಸ್ತುಗಳು, ನಾಲ್ಕು ಐತಿಹಾಸಿಕ ನಾಟಕಗಳಾದ ʻತಾಳಿಕೋಟೆʼ, ʻಅನಾರ್ಕಲಿʼ, ʻಶಿವಛತ್ರಪತಿʼ ಮತ್ತು ʻಕಾಕನ ಕೋಟೆʼಯ ವಿಶೇಷತೆಗಳು, ಭಾಷಾಂತರಿಸಿದ ರವೀಂದ್ರನಾಥ ಠಾಕೂರರ ʻಚಿತ್ರಾಂಗದʼ ಹಾಗೂ ಶೇಕ್ಸ್‌ಪಿಯರ್‌ನ ಕೆಲವು ನಾಟಕಗಳಾದ ʻಹ್ಯಾಮ್‌ಲೆಟ್‌ʼ, ʻಲಿಯರ್‌ ಮಹಾರಾಜʼ, ಚಂಡಮಾರುತ, ʻದ್ವಾದಶರಾತ್ರಿʼ ಸೇರಿ ಹಲವಾರು ನಾಟಕಗಳನ್ನು ತಂದ ಕುರಿತಾಗಿ ಹಲವಾರು ವಿಚಾರಗಳ ಬಗ್ಗೆ ಇಲ್ಲಿ ಚರ್ಚಿಸಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ವಸ್ತು ಮತ್ತು ತಂತ್ರ, ಮೊದಲ ನಾಟಕಗಳು, ʻಮಂಜುಳಾʼ, ಗೀತನಾಟಕಗಳು, ಐತಿಹಾಸಿಕ ನಾಟಕಗಳು, ಕಾಕನಕೋಟೆ, ಭಕ್ತಿ ನಾಟಕಗಳು, ಭಾಷಾಂತರಗಳು, ಭಾಷೆ ಹಾಗೂ ನಾಟಕಕಾರ ಮಾಸ್ತಿ ಹೀಗೆ ಒಟ್ಟು ಹತ್ತು ಶೀರ್ಷಿಕೆಗಳ ಲೇಖನಗಳಿವೆ.

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Related Books