ಮಾತು ಮಥಿಸಿದಾಗ

Author : ಸುರೇಂದ್ರಕುಮಾರ ಕೆರಮಗಿ

Pages 199

₹ 100.00




Year of Publication: 2015
Published by: ಸುಕೃತಿ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಡಾ. ಸುರೇಂದ್ರಕುಮಾರ ಕೆರಮಗಿ ಅವರ ‘ಮಾತು ಮಥಿಸಿದಾಗ’ ಕೃತಿಯು ವಿಮರ್ಶಾತ್ಮಕ ಒಳನೋಟಗಳುಳ್ಳ ಹೈದ್ರಾಬಾದ್-ಕರ್ನಾಟಕ ಹಾಗೂ ಕರ್ನಾಟಕದ ಹೆಸರಾಂತ ಸಾಹಿತಿಗಳ 28 ಕೃತಿಗಳ ಪರಿಶೀಲನಾ ಪುಸ್ತಕವಾಗಿದೆ. ಉದ್ಭಟ ಕಾವ್ಯ, ಅಂಬಿಗರ ಚೌಡಯ್ಯನ ವಚನಗಳು, ಮೌನೇಶ್ವರ ಮಹಿಮೆ,ಮೊದಲಾದ ಕಾವ್ಯಕೃತಿಗಳು ಸ್ವತಂತ್ರ ವೀರ ಮತ್ತು ಇತರ ಕಥೆಗಳು, ಅನುಬಂಧ ಸಂಬಂಧ, ಸಂಬಂಧಗಳು- ಕಂದರಗಳು, ಬಿತ್ತಿ ಮೊದಲಾದ ಕಥೆ-ಕಾದಂಬರಿ, ಲಘು ಪ್ರಬಂಧ, ಆತ್ಮಕಥೆಗಳ ತತ್ವಗಳನ್ನು ಕಟ್ಟಿಕೊಟ್ಟಿದ್ದಾರೆ ಪ್ರಭುರಾವ ಕಂಬಳಿವಾಲೆ, ಡಾ. ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹೈದರಾಬಾದ್ ಕರ್ನಾಟಕ ಪ್ರದೇಶದ ಸಾಹಿತಿಗಳ ಕೃತಿಗಳ ವಿಮರ್ಶೆ ಒಳಗೊಂಡ ಪುಸ್ತಕವಾಗಿದೆ.

About the Author

ಸುರೇಂದ್ರಕುಮಾರ ಕೆರಮಗಿ

ಡಾ. ಸುರೇಂದ್ರಕುಮಾರ್ ಕೆರಮಗಿ ಅವರು ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನವರು. ಸ್ವಾಯತ್ತ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರು. "ಡಾ.ಹಾ.ಮಾ ನಾಯಕ ಅವರ ಅಂಕಣ ಸಾಹಿತ್ಯ ಒಂದು ಅಧ್ಯಯನ" ವಿಷಯವಾಗಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯವು ಇವರಿಗೆ ಪಿಎಚ್ ಡಿ ಪ್ರದಾನ ಮಾಡಿದೆ. ಹಳೆಗನ್ನಡ ಸಾಹಿತ್ಯದಲ್ಲೂ ಇವರಿಗೆ ಆಸಕ್ತಿ. ರಾಷ್ಟ್ರೀಯ,ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕೃತಿಗಳು: ಆಯ್ದ ವೈಚಾರಿಕ ಪ್ರಬಂಧಗಳ ಸಂಗ್ರಹ, ಹಾ.ಮಾ ನಾಯಕ,ಕನ್ನಡದಲ್ಲಿ ಅಂಕಣ ಸಾಹಿತ್ಯ, ಸೃಷ್ಟಿ ಸೌರಭ, ಮಾತು ಮಥಿ ಸಿದಾಗ, ಸಾಹಿತ್ಯ ಸುಧೆ, ಸಾಹಿತ್ಯ ಸಂಜೀವಿನಿ, ಹೈದರಾಬಾದ ಕರ್ನಾಟಕದ ಪ್ರಮುಖ ಕಾದಂಬರಿಕಾರರು, ಮಡಿವಾಳ ...

READ MORE

Related Books