ಮಾತು ಮುತ್ತಾದಾಗ (ಅನುಭಾವದ ನುಡಿಗಳು)

Author : ಎಂ.ಜಿ. ದೇಶಪಾಂಡೆ

Pages 112

₹ 100.00




Year of Publication: 2019
Published by: ಎಸ್.ಎಲ್.ಎನ್. ಪಬ್ಲಿಕೇಷನ್ಸ್
Address: # 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು -560028

Synopsys

ಹಿರಿಯ ಲೇಖಕ ಡಾ. ಎಂ.ಜಿ. ದೇಶಪಾಂಡೆ ಅವರ ಕೃತಿ-ಮಾತು ಮುತ್ತಾದಾಗ. ಅನುಭವದ ನುಡಿಗಳನ್ನು ಸಂಗ್ರಹಿಸಿದ ಕೃತಿ ಇದು. ಲೇಖಕರೇ ಹೇಳುವಂತೆ ‘ ಈ ಕೃತಿಯು ನನ್ನ ಅನುಭವಗಳ ಸಾರ .ನಾನು ಬಾಳಿನಲ್ಲಿ ಅನೇಕ ಏಳು ಬೀಳುಗಳನ್ನು ಅನುಭವಿಸಿರುವೆ. ಜೀವನದ ಅನೇಕ ತಿರುವುಗಳಲ್ಲಿ ಏನೇನೋ ಘಟಿಸಿ ಹೋಗಿವೆ . ಕಷ್ಟದಲ್ಲಿ ಕುಗ್ಗದೆ ಸುಖದಲ್ಲಿ ಹಿಗ್ಗದೆ ಬದುಕು ಎದುರಿಸುತ್ತ ಸಾಗಿರುವೆ. ಬದುಕಿನ ಪ್ರತಿಕ್ಷಣವು ಎಲ್ಲರ ಪಾಲಿಗೆ ಹೊಸತು .ಅದನ್ನು ಅನುಭವಿಸುವವರ ದೃಷ್ಟಿಕೋನದಲ್ಲಿದೆ.ಈ ನಿಟ್ಟಿನಲ್ಲಿ ಆಲೋಚಿಸಿದಾಗ ನಾವು ತ್ಯಾಗ, ನಿಸ್ವಾರ್ಥ, ನಿರಾಡಂಬರತೆ, ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ನಗುನಗುತಾ ಬಾಳಬೇಕು. ನಡೆಯುವ ಹೆಜ್ಜೆಗಳು ತಪ್ಪದಂತೆ ಇನ್ನೊಬ್ಬರಿಗೆ ನೋವಾಗದಂತೆ ಬಾಳಿದರೆ ಮನುಷ್ಯತ್ವಕ್ಕೆ ಇನ್ನಷ್ಟು ಹೆಚ್ಚಿನ ಬೆಲೆ ಬರುತ್ತದೆ. ಈ ನಿಟ್ಟಿನಲ್ಲಿ ಮಾತು ಮುತ್ತಾದಾಗ.. ಅನುಭಾವದ ನುಡಿಗಳು ಇಲ್ಲಿವೆ’ ಎಂದು ಕೃತಿಯ ಅಂತರಾಳವನ್ನು ವಿವರಿಸಿದ್ದಾರೆ. .

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books