ಮಧುಚಂದ್ರ

Author : ಚೆನ್ನವೀರ ಕಣವಿ

Pages 62

₹ 45.00




Year of Publication: 1954
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಸಂ. 9, ’ರಮ್ಯ’, ಗೋಕುಲಂ, 3ನೆಯ ಹಂತರ, ಮೈಸೂರು
Phone: 2513821/9880749412

Synopsys

ಕಣವಿಯವರ ನವಿರಾದ ಪ್ರೇಮ ಭಾವನೆಗಳನ್ನು ಅನಾವರಣ ಮಾಡುವ ಸಂಕಲನವಿದು. ಈ ಸಂಕಲನದಲ್ಲಿ ಒಟ್ಟು 34ಕವಿತೆಗಳಿವೆ. 

ಬಾ ಮಲ್ಲಿಗೆ

ಬಾ ಮೆಲ್ಲಗೆ

ನನ್ನೆದೆ ಮೆಲ್ವಾಸಿಗೆ

ಇಳೆಗಿಳಿದಿದೆ

 ಬೆಳದಿಂಗಳು

ನನ್ನೊಲುಮೆಯ ಕರೆಗೆ

ಎನ್ನುವ ಕವಿ ಒಲವು ಬಳ್ಳಿಯಾಗಿ ಬೆಳೆದು ಚೆಂಗುಲಾಬಿಯಂತೆ ಅರಳುವದನ್ನು ಸೂಚಿಸುತ್ತಾರೆ.

’ಮುಂದೆ ಬಹುದ ಕಂಡರಾರು, ಇಂದು ಜೀವ ಕುಣಿಯಲಿ’ ಎನ್ನುವ ಕಣವಿಯವರು 'ಪ್ರೀತಿಯೊಂದೆ ನಮ್ಮ ನೀತಿ' ಎಂದು ಕಣವಿಯವರು ಹಾಡಿದ್ದಾರೆ.

ಹೆಣ್ಣು ಗಂಡಿನ ಪ್ರೀತಿ ಕ್ಷಣಿಕವಾದದ್ದಲ್ಲ. ಅದು ಜನ್ಮಾಂತರದ ಸಂಬಂಧವೆಂಬುದನ್ನು'ಜೀವ ಜೀವಾಳದಲಿ ಕೂಡಿದವಳು' ಕವಿತೆಯಲ್ಲಿ’ ಕಣವಿಯವರು ವ್ಯಕ್ತಪಡಿಸಿದ್ದಾರೆ .

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Related Books