ಮಾಧ್ಯಮ ಕರ್ನಾಟಕ

Author : ನಾಗೇಶ ಹೆಗಡೆ

Pages 384

₹ 250.00




Year of Publication: 2012
Published by: ಉದಯಭಾನು ಉನ್ನತ ಶಿಕ್ಷಣ ಕೇಂದ್ರ
Address: ಗವೀಪುರ ಸಾಲುಛತ್ರಗಳ ಎದುರು, ರಾಮಕೃಷ್ಣ ಮಠ-560019
Phone: 26609343

Synopsys

 ಪತ್ರಕರ್ತರ ಮುಂದಿರುವ ಸವಾಲುಗಳ ಕುರಿತು  ಕನ್ನಡದ ಪ್ರಮುಖ ಲೇಖಕ ನಾಗೇಶ ಹೆಗಡೆ ಅವರು ಇಲ್ಲಿ ವಿವರಿಸಿದ್ದಾರೆ. ಜರ್ನಲಿಸ್ಟ್‌ಗಳ ಕೈಗೆ ಇಂದು ಲಾಪ್‌ಟಾಪ್, ಐಪ್ಯಾಡ್, ಮೈಕ್, ಕ್ಯಾಮೆರಾ, ವಿಡಿಯೊ ರೆಕಾರ್ಡ್‌ಗಳು ಬಂದಿದೆ. ಡಿಜಿಟಲ್ ಜಗತ್ತಿನಲ್ಲಿ ಧ್ವನಿ, ದೃಶ್ಯ, ಗ್ರಾಫಿಕ್ಸ್ ಮೂಲಕ ಅಭಿವ್ಯಕ್ಯಿಯನ್ನು ಹೊರಹೊಮ್ಮಿಸಬೇಕಾಗಿದೆ. ಮಾಧ್ಯಮ ಜಗತ್ತಿನಲ್ಲಿ ಇಂತಹ ಬದಲಾವಣೆಗಳು ಕಂಡುಬಂದರೂ ಸಹ  ಪತ್ರಕರ್ತರ ಮೂಲ ಅಗತ್ಯಗಳು ಬದಲಾಗಿಲ್ಲ. ಸುದ್ದಿಯನು ಆಯ್ಕೆಮಾಡುವಲ್ಲಿ , ಅದನ್ನು ಅಭಿವ್ಯಕ್ತಪಡಿಸುವಲ್ಲಿ, ಮೇಲಿನವರೊಂದಿಗೆ ಏಗುವಲ್ಲಿ, ಹೊಸಬರನ್ನು ನಿಭಾಯಿಸುವಲ್ಲಿ ಇನ್ನು ಪತ್ರಕರ್ತರಲ್ಲಿ ಬದಲಾವಣೆ ಕಂಡು ಬಂದಿಲ್ಲ.  ಇಂತಹ ಪ್ರಮುಖ ಸಂಗತಿಗಳ ಕುರಿತು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಜರ್ನಲಿಸಂ ವಿದ್ಯಾರ್ಥಿಗಳಿಗೆ, ಪತ್ರಕರ್ತರ ಜಗತ್ತನ್ನು ತಿಳಿಯ ಬಯಸುವವರಿಗೆ ಇದೊಂದು ಉತ್ತಮ ಕೈಪಿಡಿಯಾಗಿದೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books