ಮದ್ಯಪಾನ

Author : ಪರಂಜ್ಯೋತಿ (ಕೆ.ಪಿ. ಸ್ವಾಮಿ)

Pages 80

₹ 45.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: #11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಖ್ಯಾತ ಲೇಖಕ ಪರಂಜ್ಯೋತಿ (ಕೆಪಿ.ಸ್ವಾಮಿ) ಅವರು ಬರೆದ ಕೃತಿ-ಮದ್ಯಪಾನ. ಸಂತೋಷ-ವ್ಯಸನ ಯಾವುದು ಸರಿ? ಎಂಬುದು ಈ ಕೃತಿಗೆ ನೀಡಿದ ಉಪಶೀರ್ಷಿಕೆ. ಮದ್ಯಪಾನವು ಒಂದು ಸಾಮಾಜಿಕ ಪೀಡೆ. ಅನೇಕ ಸುಖೀ ಸಂಸಾರಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸುತ್ತದೆ. ಮಕ್ಕಳು ಮನೆಯ ಹಿರಿಯರನ್ನು ಅನುಸರಿಸಿ ಇದನ್ನು ಕಲಿತುಕೊಳ್ಳಬಹುದು. ವಿದ್ಯಾರ್ಥಿ, ಯುವಜನರು ತಮ್ಮ ಕುಡುಕ ಸ್ನೇಹಿತರಿಂದಲೊ ಅಥವಾ ಅವರ ಒಡನಾಟದಲ್ಲಿ ಇರಲೇಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ಸ್ನೇಹಕ್ಕೆ ಕಟ್ಟುಬಿದ್ದು ಈ ದುಶ್ಚಟವನ್ನು ರೂಢಿಸಿಕೊಳ್ಳಬಹುದು. ಭಗ್ನ ಪ್ರಣಯಿಗಳು ಹತಾಶೆಯಿಂದಲೂ ಇದಕ್ಕೆ ಮೊರೆ ಹೋಗಬಹುದು. ಶ್ರೀಮಂತರು ಜಯಿಸಲಾಗದೆ ತಾತ್ಕಾಲಿಕ ಉಪಶಮನಕ್ಕಾಗಿ ಇದರ ದಾಸರಾಗಬಹುದು. ಒಮ್ಮೆ ಇದರ ಮಾಯಾಜಾಲದಲ್ಲಿ ಸಿಲುಕಿದರೆ ಇದರಿಂದ ಬಿಡುಗಡೆ ಹೊಂದುವುದು ಬಹಳ ಕಷ್ಟ. ವೈದ್ಯವಿಜ್ಞಾನದಲ್ಲಿ ಹಿತಮಿತವಾಗಿ ಬಳಸಲ್ಪಡುವ ಮದ್ಯದ ನಿರಂತರ ಸೇವನೆಯು ಜೀವಕ್ಕೆ ಮಾರಕವೂ ಆಗಬಲ್ಲದು. ಅಲ್ಪಕಾಲಿಕ ಉಪಶಮನಕ್ಕಾಗಿ ದೀರ್ಘಕಾಲದ ನೋವನ್ನು ತರುವ ಈ ಪಾನೀಯದ ಬಗ್ಗೆ ವಿವರಗಳನ್ನು ಈ ಕೃತಿಯು ನೀಡುತ್ತದೆ. ಅತಿ ಕುಡುಕತನವು ಮನುಷ್ಯನನ್ನು ಮನೆಯಿಂದ ಮಸಣಕ್ಕೆ ಅಟ್ಟುತ್ತದೆ. ಇಂತಹ ಭಯಂಕರ ಪೀಡೆಯನ್ನು ತೊಲಗಿಸಲು ಸಾಮಾಜಿಕ ಸುಧಾರಣಾ ಘಟಕಗಳು, ಸಾರ್ವಜನಿಕರು ಬೃಹತ್ ಆಂದೋಲನವನ್ನು ನಡೆಸಬೇಕು ಎಂಬುದೇ ಈ ಕೃತಿಯ ಸಂದೇಶ.

About the Author

ಪರಂಜ್ಯೋತಿ (ಕೆ.ಪಿ. ಸ್ವಾಮಿ)
(10 June 1936 - 04 July 2019)

ಪತ್ರಕರ್ತ, ಕಾದಂಬರಿಕಾರ, ಸಾಮಾಜಿಕ ಅಧ್ಯಯನಕಾರರಾಗಿರುವ ಪರಂಜ್ಯೋತಿ ಎಂತಲೇ ಪರಿಚಿತರಾಗಿರುವ ಕೆ.ಪಿ. ಸ್ವಾಮಿ ಅವರು ಜನಿಸಿದ್ದು 1936 ಜೂನ್ 10ರಂದು ಮಂಡ್ಯ ಜಿಲ್ಲಯ ಮಳವಳ್ಳಿಯಲ್ಲಿ. ತಂದೆ ರವಳ ಮೇಸ್ತ್ರಿ, ತಾಯಿ ಚೌಡಮ್ಮ. ಉದ್ಯೋಗ ಹರಸಿ ತಮಿಳುನಾಡಿನ ಕಡೆಗೆ ವಲಸೆಬಂದ ಇವರ ಕುಟುಂಬ ನೆಲೆಸಿದ್ದು ನೀಲಗಿರಿಯಲ್ಲಿ. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮಂಡ್ಯದಲ್ಲಿ ಪ್ರೌಢ ಶಿಕ್ಷಣ ಪಡೆದರು. ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಇವರು ಇಂದ್ರ ಧನುಸ್, ಪ್ರಪಂಚ, ಸೋವಿಯೆಟ್ ಲ್ಯಾಂಡ್ ಮುಂತಾದ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ, ಅನುವಾದಕರಾಗಿ ಕಾರ್ಯ ನಿರ್ವಹಿಸಿದ್ದರು.  ಪರಂಜ್ಯೋತಿ ಅವರ ಪ್ರಮುಖ ಕೃತಿಗಳೆಂದರೆ ಒಲವು ಚೆಲುವಲ್ಲಿ, ಬದುಕು, ...

READ MORE

Related Books