ಮಹಾಡ್ ಕೆರೆ ಸತ್ಯಾಗ್ರಹ

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 252

₹ 162.00




Year of Publication: 2020
Published by: ಕ್ರಿಯಾ ಪ್ರಕಾಶನ
Address: # 12, ಥಾನಪ್ಪ ಗಾರ್ಡನ್, 18 ನೇ ಅಡ್ಡರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027
Phone: 080 2223 4369

Synopsys

ಮಹಾಡ್ ಕೆರೆ ಸತ್ಯಾಗ್ರಹ (ದಲಿತ ಚಳವಳಿಗಳ ಒರೆಗಲ್ಲು)-ಈ ಕೃತಿಯನ್ನು ಮೂಲತಃ ರಾಮಚಂದ್ರ ಬಾಬಾಜಿ ಮೋರೆ ಅವರು ಮರಾಠಿಯಲ್ಲಿ ಬರೆದಿದ್ದು, ಅದನ್ನು ಲೇಖಕ ಅಬ್ದುಲ್ ರೆಹಮಾನ್ ಪಾಷಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಕೃತಿಗೆ ಹೆಸರಾಂತ ಲೇಖಕ ಡಾ. ಆನಂದ ತೇಲ್ತುಂಬ್ದೆ ಸುದೀರ್ಘವಾದ ಮುನ್ನುಡಿ ಬರೆದಿದ್ದಾರೆ. ಭಾರತೀಯ ದಲಿತ ಚಳವಳಿಯ ಆರಂಭ ಹಾಗೂ ಮುಂದುವರಿದ ತೀವ್ರತೆ ಕುರಿತು ಹೇಳುವುದಾದಲ್ಲಿ ಮೊದಲು ಮಹಾಡ್ ಕೆರೆ ಚಳವಳಿಯನ್ನೇ ಪ್ರಸ್ತಾಪಿಸಲಾಗುತ್ತದೆ. ಈ ಘಟನೆಯೇ ದಲಿತ ವಿಮೋಚನೆಯ ಬೀಜಗಳಿವೆ. ಈ ಘಟನೆ ನಂತರ ದಲಿತ ಸಮೂಹ ವಿಭಿನ್ನ ರೀತಿಯಲ್ಲಿ ವಿಚಾರಿಸುವಷ್ಟು ಸಾಮರ್ಥ್ಯ ಪಡೆದುಕೊಂಡಿತು. ಅದು ದಲಿತರ ಸ್ವಾಭಿಮಾನವನ್ನು ಪ್ರೇರೇಪಿಸಿತು. ಈ ಎಲ್ಲ ಕಾರಣದಿಂದ, ಮಹಾಡ್ ಕೆರೆ ಸತ್ಯಾಗ್ರಹ, ಕೋರೆಗಾಂವ್ ದಾಳಿ ಇತ್ಯಾದಿ ಸನ್ನಿವೇಶಗಳು ದಲಿತರ ಚಳವಳಿಯ ಇತಿಹಾಸದಲ್ಲಿ ಎಂದೂ ಮರೆಯದ ನೆನಪುಗಳಾಗಿ, ಐತಿಹಾಸಿಕ ದಾಖಲೆಯಾಗಿ ಉಳಿದಿವೆ. ಮಹಾಡ್ ಕೆರೆ ಸತ್ಯಾಗ್ರಹದ ಹಿಂದಿನ ಕಾರಣ, ಚಳವಳಿಗೆ ಸಿಕ್ಕ ಬೆಂಬಲ, ಅದು ಪಡೆದುಕೊಂಡ ಸ್ವರೂಪ ಇತ್ಯಾದಿ ಕುರಿತು ಬರೆದ ಚಿಂತನೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Related Books