ಮಹಾಕಥನದ ಮಾಸ್ತಿ

Author : ಕೆ. ಸತ್ಯನಾರಾಯಣ

Pages 194

₹ 144.00




Year of Publication: 2020
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011,
Phone: 0802244 3996

Synopsys

ಲೇಖಕ ಡಾ. ಕೆ. ಸತ್ಯನಾರಾಯಣ ಅವರ ಕೃತಿ-ಮಹಾಕಥನದ ಮಾಸ್ತಿ. ಕನ್ನಡ ಸಾಹಿತ್ಯ ವಲಯದಲ್ಲಿ ಸಣ್ಣ ಕಥೆಗಳ ಜನಕ ಎಂದೇ ಖ್ಯಾತಿಯ ಡಾ. ಮಾಸ್ತಿ ಅವರ ಕಥೆಗಳು ಸೂಕ್ಷ್ಮ ಮನಸ್ಸಿನ ತಾಕಲಾಟ, ತಳಮಳ, ತಲ್ಲಣಗಳನ್ನು ಸಮರ್ಥವಾಗಿ ಹಿಡಿದಿಡುತ್ತವೆ. ಆದ್ದರಿಂದ, ಮಾಸ್ತಿ ಕಥೆಗಳೆಂದರೆ ಓದುಗರ ಮನ ಸೂರೆಗೊಳ್ಳುತ್ತವೆ. ಅವರ ವ್ಯಕ್ತಿತ್ವದ ಎತ್ತರವೂ ಓದುಗರನ್ನು ಆಕರ್ಷಿಸುತ್ತದೆ. ಮಾಸ್ತಿ ಅವರ ಸಾಹಿತ್ಯಕ ಎತ್ತರ-ಆಳ-ಅಗಲಗಳನ್ನುವಿಮರ್ಶಾತ್ಮಕವಾಗಿ ದರ್ಶಿಸುವ ಕೃತಿ.

ಈ ಕೃತಿಯಲ್ಲಿ ಮಾಸ್ತಿಗನ್ನಡಿ(ನಿಜ ಕತೆ), ಕಥಾನಾಯಕನಾಗಿ ಮಾಸ್ತಿ, ಸ್ಥಿತ್ಯಂತರಗಳ ಶತಮಾನದ ಕತೆಗಾರ ಮಾಸ್ತಿ, ಮುಂದಿನ ಶತಮಾನಕ್ಕೆ ಮಾಸ್ತಿಕತೆಗಳು, ಸಮುದಾಯ ಕಥನದ ಕಲೆಗಾರ, ಮಾಸ್ತಿ ಕುರಿತು ಬೇಂದ್ರೆ, ಸಾಹಿತ್ಯದ ಆತ್ಮಜ್ಞಾನ, ಆದಿಕವಿ ವಾಲ್ಮೀಕಿ, ಭಾರತ ತೀರ್ಥ, ಎರಡು ಸಂದರ್ಶನಗಳು, ಪ್ರಾರಂಭದ ಕತೆಗಳು, ಕಾಣುವುದು, ಪ್ರಸ್ತುತಗೊಳಿಸಿಕೊಳ್ಳುವುದು, ಸಾವಿನ ಹೊಸ್ತಿಲಲ್ಲಿ ಬದುಕು, ಇಲಿಚ್ ಮತ್ತು ಮಂತ್ರೋದಯ, ಮಾಸ್ತಿ ಕತೆಗಳು ಮತ್ತು ಮುನೀರ್, ಲೋಕ ಸಂಸಾರದ ವಿನ್ಯಾಸ, ವಿಧಿಯ ಚೌಕಾಭಾರ, ಎಲ್ಲಿಯ ಕತೆ ಇಲ್ಲಿಯ ತೀರ್ಪು, ವಲಸೆಯ ಕಥನ, ಇತಿಹಾಸದ ತಪ್ಪು- ಒಪ್ಪು: ಮಾಸ್ತಿ ನ್ಯಾಯ, ನ್ಯಾಯ-ಸತ್ಯ-ಸಾಕ್ಷಿ, ಪ್ರಭುಗಳ ಕಥನ, ದೊಡ್ಡ ಸ್ವಾಮಿಯವರ ದಿನಚರಿ, ಮಾಸ್ತಿ ಬರೆದ ಮುಸ್ಲಿಂ ಕತೆಗಳು,  ಮೊದಲ ಕತೆ- ಕೊನೆಯ ಕತೆ, ಪ್ರತಿರೋಧ- ಪಾವಿತ್ಯ್ರದ ನೆಲೆಗಳು, ಮಹಾನ್ ಕಥನದ ಗುಟ್ಟುಗಳು ಹೀಗೆ ಇವೆಲ್ಲಾವುಗಳನ್ನು ಒಳಗೊಂಡಿದೆ. 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books