ಮಹಾನುಭಾವಿ ಶ್ರೀ ಚನ್ನಮಲ್ಲಿಕಾರ್ಜುನರು

Author : ಚನ್ನಪ್ಪ ಎರೇಸೀಮೆ

Pages 952

₹ 65.00




Year of Publication: 1983
Published by: ಶ್ರೀ ಜಗದ್ಗುರು ಗಂಗಾಧರ ಧರ್ಮ ಪ್ರಸಾರಕ ಮಂಡಳ
Address: ಮೂರುಸಾವಿರ ಮಠ, ಹುಬ್ಬಳ್ಳಿ

Synopsys

ವೀರಶೈವ ತತ್ವಪ್ರಸಾರ-ಪ್ರಚಾರಕ್ಕಾಗಿ ಶ್ರೀಚನ್ನಮಲ್ಲಿಕಾರ್ಜುನ ಅವರು ಹಾನಗಲ್ ಶ್ರೀ ಕುಮಾರ ಸ್ವಾಮಿಗಳ ನೆನಪಿನಲ್ಲಿ ‘ಸದ್ಧರ್ಮ ದೀಪಿಕೆ’ ಎಂಬ ಪತ್ರಿಕೆ ಆರಂಭಿಸಿದರು. ಸಂಸ್ಕೃತ ಹಾಗೂ ಇಂಗ್ಲಿಷಿನಲ್ಲೂ ಪಾಂಡಿತ್ಯ ಪಡೆದಿದ್ದ ಅವರು ಪತ್ರಿಕೆಗಾಗಿ ‘ಸಿದ್ದೇಶ್ವರ ಮುದ್ರಣಾಲಯ’ವನ್ನು ಸ್ಥಾಪಿಸಿದ್ದರು. ಜೀವನ ಚಾರಿತ್ಯ್ರ ಹಾಗೂ ಆರಂಭದ ಬರವಣಿಗೆಗಳು, ಚನ್ನಮಲ್ಲಿಕಾರ್ಜುನರ ಎರಡು ಮಹತ್ವದ ಸಂಶೋಧನೆ ಗ್ರಂಥಗಳ ಸ್ಥೂಲ ಪರಿಚಯ ಹಾಗೂ ಅವರ ಹಲವು ಸಂಶೋಧನಾತ್ಮಕ ಲೇಖನಗಳು, ತತ್ವ-ವಿಚಾರ-ವಿಜ್ಞಾನ, ಗ್ರಂಥ ಪರಿಚಯ ಮತ್ತು ಗ್ರಂಥ ವಿಮರ್ಶೆ, ಗ್ರಂಥ ಸಂಗ್ರಹ ಸಂಪಾದನೆ ಪ್ರಾಚೀನ ಕಾವ್ಯಗಳು, ಲಿಂಗವಂತ ಸಮಾಜದ ಏಳಿಗೆ, ಪತ್ರಿಕೋದ್ಯಮ, ಪತ್ರೋತ್ತರ ಮತ್ತು ವಾದ ಭೂಮಿ ಹೀಗೆ ವಿವಿಧ ಶೀರ್ಷಿಕೆಗಳಡಿ ಚೆನ್ನಮಲ್ಲಿಕಾರ್ಜುನರ ಬದುಕು-ಬರೆಹದ ಸಮಗ್ರ ಚಿತ್ರಣವನ್ನು ಪಂಡಿತ ಚನ್ನಪ್ಪ ಎರೇಸೀಮೆ ಹಾಗೂ ಎಚ್. ದೇವೀರಪ್ಪ ಅವರು ಕಟ್ಟಿಕೊಟ್ಟಿದ್ದಾರೆ.

About the Author

ಚನ್ನಪ್ಪ ಎರೇಸೀಮೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...

READ MORE

Related Books