ಮಹಾಪ್ರಸ್ಥಾನ ದಲಿತ ಸಂವೇದಿ ಕಥೆಗಳು

Author : ಕೇಶವರೆಡ್ಡಿ ಹಂದ್ರಾಳ

Pages 184

₹ 150.00




Year of Publication: 2019
Published by: ABC ಪುಸ್ತಕ
Address: #19/20, ಆಶೀರ್ವಾದ ಮ್ಯಾನ್ ಷನ್, 17ನೇ ಅಡ್ಡ ರಸ್ತೆ, ಮುನೇಶ್ವರನಗರ, ಉಲ್ಲಾಳು ಮುಖ್ಯರಸ್ತೆ, ಬೆಂಗಳೂರು-560056
Phone: 9845520382

Synopsys

‘ಮಹಾಪ್ರಸ್ಥಾನ ದಲಿತ ಸಂವೇದಿ ಕಥೆಗಳು’ ಕೃತಿಯು ಕೇಶವರೆಡ್ಡಿ ಹಂದ್ರಾಳ ಅವರ ಕಥಾಸಂಕಲನವಾಗಿದೆ. ಈ ಸಂಕಲನದ ಬಹುತೇಕ ಕಥೆಗಳು ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ಬರೆದಂತಹ ಕಥೆಗಳಾಗಿವೆ ಎನ್ನುತ್ತಾರೆ ಇಲ್ಲಿ ಲೇಖಕ ಕೇಶವರೆಡ್ಡಿ ಹಂದ್ರಾಳ. ಭಾರತದ ಅಂದಿನ ಸಂದರ್ಭದ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಕೇಶವರೆಡ್ಡಿ ಹಂದ್ರಾಳರು ತಮ್ಮ ಕಥೆಗಳಲ್ಲಿ ಅತ್ಯಂತ ದಟ್ಟವಾಗಿ ಅನಾವರಣಗೊಳಿಸಿದ್ದಾರೆ. ದಲಿತ ಸಮುದಾಯದ ಬಡತನ, ಹಸಿವು, ದುಃಖ- ದುಮ್ಮಾನಗಳ ಕರಾಳ ಮುಖಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಭಾರತದ ಸಾಮಾನ್ಯ ಜನರ ಬದುಕಿನ ಅರಣ್ಯರೋಧನವನ್ನು ಬಟಾಬಯಲು ಮಾಡುತ್ತಾರೆ. ಹಾಗೆಯೇ ಇಲ್ಲಿ ಬಳಸಿಕೊಂಡಿರುವ ಭಾಷೆ ಕೂಡ ಇಡೀ ಭಾರತದ ಹಳ್ಳಿಗಾಡಿನ ಸೊಗಡನ್ನು ಮೈಮೆತ್ತಿಕೊಂಡು ಸಂಬಂಧ ಮತ್ತು ಸಂವೇದನೆಗಳ ನಡುವೆ ಒಂದು ಉದಾತ್ತವಾದ ಸೇತುವೆಯನ್ನೇ ನಿರ್ಮಿಸಿಬಿಡುತ್ತದೆ. ಈ ಕೃತಿಯಲ್ಲಿ ಒಟ್ಟು 15 ಕತೆಗಳಾದ, ಮಹಾಪ್ರಸ್ಥಾನ, ದಮನ, ಗಾಂಧಿ, ಒಡಲ ಕಡಲಿನ ವಿಷದ ಅಲೆಗಳು, ಡಾಕ್ಟರ್ ಹುಲಿಗೆಪ್ಪನ ಸ್ಕೂಟರ್ ಲೋನು, ಪೀತ್ಲನ ಪಟಾಕಿ ಪರ್ವ, ಹಿಮದ ಗೋಪುರಕೆ ಹಚ್ಚುವೆನು ಬಣ್ಣ, ವ್ರಣ, ತಿಪ್ಲನಿಗೆ ವಕ್ಕರಿಸಿದ ಲಾಟರಿ ಮಾರಿ, ಭೂಗೋಳ, ಚಹರೆ, ವರ್ಣಭೇದ, ಪ್ರಜಾಪ್ರಭುತ್ವದ ಕ್ಷಣಗಳು, ಗ್ಯಾಂಗ್ ರೇಪ್, ಜಾಗೃತಿಯನ್ನು ಒಳಗೊಂಡಿದೆ.

About the Author

ಕೇಶವರೆಡ್ಡಿ ಹಂದ್ರಾಳ
(22 July 1957)

ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರೂ ಅನಕ್ಷರಸ್ಥರು . ಕೃಷಿ ಕೆಲಸಗಳನ್ನು ಮಾಡಿಕೊಂಡೇ ಹಂದ್ರಾಳದ ಪ್ರೈಮರಿ ಸ್ಕೂಲು , ಬ್ಯಾಲ್ಯದ ಮಿಡ್ಲಿಸ್ಕೂಲು ಪೂರೈಸಿದ್ದು . ತಾತ ನರಸಿಂಹರೆಡ್ಡಿ ಆಂಧ್ರದ ಅನಂತಪುರ ಜಿಲ್ಲೆಯ ಊರೊಂದರ ಜಮೀನುದಾರ . ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಆ ಸೀಮೆಯ ಶೋಷಕ ಬ್ರಿಟಿಷ್ ಕಲೆಕ್ಟರ್ ನನ್ನು ಖೂನಿ ಮಾಡಿ ರಾತ್ರೋರಾತ್ರಿ ಕರ್ನಾಟಕದ ಕಡೆ ಪ್ರಯಾಣ .  ಕಾಪು ರೆಡ್ಡಿಯಾಗಿದ್ದ ತಾತ ಮದುವೆಯಾಗಿದ್ದು ಕಮ್ಮ ಜಾತಿಯ ಅಜ್ಜಿಯನ್ನು . 1947 ...

READ MORE

Related Books