ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು

Author : ಜಿ.ಎನ್. ಉಪಾಧ್ಯ

Pages 165

₹ 140.00




Published by: ಕನ್ನಡ ವಿಭಾಗ ಮುಂಬೈ ವಿವಿ

Synopsys

ಕನ್ನಡ ಮತ್ತು ಮಹಾರಾಷ್ಟ್ರದ ನಡುವಿನ ಸಂಬಂಧವನ್ನು, ಸಾಂಸ್ಕೃತಿಕ ಬಾಂಧವ್ಯವನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಡಾ. ಜಿ. ಎನ್. ಉಪಾಧ್ಯ ಅವರು ಬರೆದಿರುವ ಸಂಶೋಧನಾ ಕೃತಿ 'ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು' ಮಾಡುತ್ತದೆ. ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಬಾಂಧವ್ಯ, ಮಹಾರಾಷ್ಟ್ರ ಕನ್ನಡ ಶಾಸನಗಳಲ್ಲಿ ಸ್ಥಳನಾಮಗಳು, ಮಹಾರಾಷ್ಟ್ರದ ಗ್ರಾಮನಾಮಗಳ ಕನ್ನಡತನ, ಸೊಲ್ಲಾಪುರ ಜಿಲ್ಲೆಯ ಗ್ರಾಮನಾಮಗಳು, ದೇಗಲೂರು-ಅಮರಾವತಿಯಾದ ಬಗೆಗಿಷ್ಟು, ನಾವು ಮರೆತ ಮಂಗಳವಾಡ...ಹೀಗೆ ಮಹಾರಾಷ್ಟ್ರದಲ್ಲಿ ಕನ್ನಡ ಬೇರುಗಳನ್ನು ತಡಕಾಡುವ ಆರು ಅಧ್ಯಾಯಗಳಿವೆ ಈ ಕೃತಿಯಲ್ಲಿ, ಯಾವುದೇ ಪ್ರಾಂತದ ಮೇಲೆ ಅರಸರ ಪ್ರಭುತ್ವ ಆಗಾಗ ಬದಲಾಗಬಹುದು. ಆದರೆ ಸ್ಥಳೀಯ ಭಾಷೆಯ ಭಾಗವಾಗಿರುವ ವ್ಯಕ್ತಿ-ಗ್ರಾಮಗಳಿಗೆ ಹೆಸರನ್ನಿಡುವ ಪದ್ಧತಿ ಬದಲಾಗದು. ಜನತೆಯ ಸಂಸ್ಕೃತಿಯ ಘಟಕವಾಗಿರುವ ಈ ಪದ್ಧತಿ ಬಹುಕಾಲ ಗಟ್ಟಿಯಾಗಿ ನಿಲ್ಲುತ್ತದೆ. ಆದುದರಿಂದ ಒಂದು ಸ್ಥಳದ ಪ್ರಾಚೀನ ಇತಿಹಾಸವನ್ನು ಅರಿಯಲು ಈ ಸ್ಥಳನಾಮಗಳು ಬಹುಮುಖ್ಯ ಆಧಾರ' ಎಂದು ಹಿರಿಯ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿಯ ಮಾತಿನ ತಳಹದಿಯ ಮೇಲೆ ಈ ಕೃತಿ ರೂಪುಗೊಂಡಿದೆ.

About the Author

ಜಿ.ಎನ್. ಉಪಾಧ್ಯ
(07 February 1967)

ಜಿ.ಎನ್. ಉಪಾಧ್ಯ ಮೂಲತಃ ಉಡುಪಿ ತಾಲೂಕಿನ ಕೋಟದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್‍ಯಾಂಕ್ನೊಂದಿಗೆ ಗಳಿಸಿಕೊಂಡರು. ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ  ಪದವಿ ಪಡೆದಿದ್ದಾರೆ. ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ಕ್ಷೇತ್ರಗಳು. 'ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಅವರು ಕೆಲವು ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ...

READ MORE

Related Books