ಮಹಾಶ್ವೇತಾ ದೇವಿ

Author : ಗೀತಾ ಶೆಣೈ

Pages 48

₹ 25.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಕುಮಾರಕೃಪಾ ಪಶ್ಚಿಮ, ಬೆಂಗಳೂರು
Phone: 08022392460

Synopsys

ಬುಡಕಟ್ಟು ಜನರು, ಹೆಣ್ಣುಮಕ್ಕಳು ಹಾಗೂ ದಲಿತರ ದುರವಸ್ಥೆಯ ಬಗ್ಗೆ ಬಿಹಾರ, ಮಧ್ಯಪ್ರದೇಶ ಛತ್ತೀಸ್‌ಘಡ ಪ್ರದೇಶಗಳ ಗುಡ್ಡಗಾಡು ಜನರ ಸಮಸ್ಯೆಗಳ ಕುರಿತು ಕತೆ ಕಾದಂಬರಿಗಳ ಮೂಲಕ ದನಿ ಎತ್ತಿದವರು ಮಹಾಶ್ವೇತಾದೇವಿ. ಭಾರತದ ಯಾವುದೇ ರಾಜ್ಯದಲ್ಲಿ 'ಜೀತಪದ್ದತಿ' ಇಲ್ಲವೆಂದು ಎಷ್ಟೇ ಹೇಳಲಿ, ಅದು ಪ್ರತಿಯೊಂದು ರಾಜ್ಯದಲ್ಲಿಯೂ ಅಸ್ತಿತ್ವದಲ್ಲಿದೆ ಎಂದು ಮಹಾಶ್ವೇತಾ ದೇವಿಯವರ ನಿಲುವು.

ಈ ಹಿನ್ನೆಲೆಯಲ್ಲಿ ಅಸಂಖ್ಯ ಕಥೆ ಕಾದಂಬರಿಗಳನ್ನು ಬರೆಯುವ ಮಹಾಶ್ವೇತಾ ದೇವಿ ಮೇಲ್ಜಾತಿಯ ಜಮೀನುದಾರರ, ಶ್ರೀಮಂತರ, ಬಡ್ಡಿದಾರರ ಹಾಗೂ ಸರ್ಕಾರಿ ಅಧಿಕಾರಿಗಳ ದೌರ್ಜನ್ಯವನ್ನು ಪರಿಣಾಮಕಾರಿಯಾಗಿ ಚಿತ್ರಿಸಿರುವರು. ದ ಕ್ವೀನ್ ಆಫ್ ಝಾನ್ಸಿ, ಅರಣ್‌ ಅಧಿಕಾರ್, ಅಗ್ನಿಗರ್ಭ, ಛೋಟೆ ಮುಂಡಾ ಏವಂ ತರ್ ತೀರ್, ಧೋಪ್ಲಿ, ಬಸಾಯಿ ಟುಡು, ರುಡಾಲಿ, ದ್ರೌಪದಿ, ಕುಲಪುತ್ರ ಇತ್ಯಾದಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರನ್ನು ಕನ್ನಡದ ಓದುಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಗೀತಾ ಶೆಣೈ ಈ ಕೃತಿ ರಚಿಸಿದ್ದಾರೆ.

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books