ಮಹತೀ

Author : ಪ್ರಣತಾರ್ತಿಹರನ್

Pages 722




Year of Publication: 2000
Published by: ಸಮುದಾಯ ಅಧ್ಯಯನ ಕೇಂದ್ರ
Address: ಮೈಸೂರು

Synopsys

ಸಂಗೀತ ಕಲಾರತ್ನ ಪ್ರೊ. ಆರ್.ಎನ್. ದೊರೆಸ್ವಾಮಿ ಅಭಿನಂದನ ಗ್ರಂಥ- ‘ಮಹತೀ’. ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ, ವಿದ್ವಾನ್ ಆರ್.ಕೆ. ಶ್ರೀಕಂಠನ್, ವಿದ್ವಾನ್ ಆರ್.ಆರ್. ಕೇಶವಮೂರ್ತಿ, ಬಿವಿಕೆ ಶಾಸ್ತ್ರಿ, ಪ್ರೊ. ರಾ. ಸತ್ಯನಾರಾಯಣ, ಪ್ರೊ.ಜಿ.ಟಿ. ನಾರಾಯಣರಾವ್ ಮೊದಲಾದ ದಿಗ್ಗಜರ ಅಭಿನಂದನ ಸಮಿತಿಯಲ್ಲಿ ಇದ್ದರು. ಪ್ರೊ. ಆರ್.ಎನ್.ಡಿ. ಅವರ ಭಾಷಣಗಳ ಲಿಖಿತರೂಪಗಳು ಮತ್ತು ಲೇಖನಗಳು ಹಾಗೂ ಅವರೇ ರಚಿಸಿದ್ದ ಗೇಯರಚನೆಗಳು, ಅವರ ಕೃತಿಗಳ ಪರಿಚಯ ಮತ್ತು ವಿಮರ್ಶೆ, ಅವರ ಅಭಿಮಾನಿಗಳು ಬರೆದ ಅಭಿನಂದನ ಲೇಖನಗಳು, ಅವರ ಜೀವನದ ಹೆಚ್ಚಿನ ವಿವರಗಳು ಏಳು ಭಾಗಗಳಲ್ಲಿ ಸೇರಿದ ಅಭಿನಂದನ ಗ್ರಂಥ ಇದಾಗಿದೆ.

About the Author

ಪ್ರಣತಾರ್ತಿಹರನ್

ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...

READ MORE

Related Books