ಮಹಿಳೆ ಚರಿತ್ರೆ-ಪುರಾಣ

Author : ರಾಮಲಿಂಗಪ್ಪ ಟಿ. ಬೇಗೂರು

Pages 224

₹ 150.00




Year of Publication: 2014
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಪ್ರಾಚೀನ-ಸಾಂಪ್ರದಾಯಿಕ ಪುರುಷ ನಿರ್ಮಿತ ಮೌಲ್ಯಗಳನ್ನು ಮತ್ತೆ ಮತ್ತೆ ಕೆದಕಿ ಬರೆಯಲ್ಪಡುವ ಅನೇಕ ಪುಸ್ತಕಗಳಿಗೆ ಮಹಿಳೆ: ಚರಿತ್ರೆ-ಪುರಾಣ ಪುಸ್ತಕವು ತದ್ವಿರುದ್ದವಾಗಿದೆ. ಇಲ್ಲಿ ಆಧುನಿಕ ಮಹಿಳಾ ಕಾವ್ಯ ಎಂದರೆ ಕೇವಲ ಕಾಲಘಟ್ಟದ ಕುರಿತಾಗಿ ಉಲ್ಲೇಖಿಸಲಾಗಿದೆಯೇ ಹೊರತು ಸಂವೇದನೆಯ ಕುರಿತಾಗಿಯಲ್ಲ. 

ಈ ಪುಸ್ತಕ ಕನ್ನಡದ ಮಹಿಳಾ ಕವಿಗಳ ಕುರಿತಾದ ಸಂಕಲನವಲ್ಲ. ವಿಶೇಷವಾಗಿ ಪುರಾಣ ಮತ್ತು ಚರಿತ್ರೆಯ ಕುರಿತಾದ ಉಲ್ಲೇಖ, ಹೇಳಿಕೆ ಅಥವಾ ಅಧ್ಯಯನಗಳಿದ್ದಲ್ಲಿ ಅವುಗಳನ್ನು ವಿಶ್ಲೇಷಿಸುವ ಕೃತಿ. ಒಂದು ಲೇಖನವಾಗಿ ರೂಪುಗೊಳ್ಳಬೇಕಾಗಿದ್ದ ವಸ್ತುವಿಷಯ ಬೆಳೆದು ಹೆಮ್ಮರವಾಗಿ ಒಂದು ಅಧ್ಯಯನ ಕೃತಿಯ ರೂಪದಲ್ಲಿ ಓದುಗರಿಗೆ ಲಭ್ಯವಿದೆ. 

ಇಲ್ಲಿ ಪುರಾಣವೆಂದರೆ ಕೇವಲ ಮಹಾಭಾರತ – ರಾಮಾಯಣಕ್ಕೆ ಸೀಮಿತಗೊಳಿಸದೆ, ಜನಾಂಗೀಯ ಪರಂಪರೆ, ಪ್ರಾದೇಶಿಕ ಪರಂಪರೆ ಹಾಗೂ ಭಾಷಿಕ ಪರಂಪರೆಗಳನ್ನು ಕೂಡ ಅಭ್ಯಸಿಸಿ ಬರೆದಿರುವಂತಹ ಪ್ರಬುದ್ಧ ಲೇಖನಗಳು ಈ ಪುಸ್ತಕದಲ್ಲಿ ಇವೆ. ಪ್ರತೀ ಪುರಾಣ ಚರಿತ್ರೆಗಳನ್ನು ಮಹಿಳಾ ಕಾವ್ಯವು ಆದಿಯಿಂದಲೂ ಪ್ರಶ್ನಿಸುತ್ತಾ ಬಂದಿದೆ ಹಾಗೂ ನಿರಾಕರಿಸಿದೆ ಕೂಡ. ಹಾಗಾಗಿ ಈ ಪುಸ್ತಕದ ಎರಡನೇಯ ಭಾಗದಲ್ಲಿ ಮಹಿಳಾ ಕವಿಗಳ ಕವಿತೆಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಡಾ. ರಾಮಚಂದ್ರ ಬೇಗೂರು ಇವರ ಕನ್ನಡ ವಿದ್ವತ್ತಿಗೆ ಹಾಗೂ ಸಾಹಿತ್ಯದಲ್ಲಿ ಮಹಿಳೆಯರ ಅಸ್ಥಿತ್ವದ ಕುರಿತಾಗಿನ ಜ್ಞಾನಕ್ಕೆ ಹಿಡಿದ ಕನ್ನಡಿ ಈ ಪುಸ್ತಕ. 

About the Author

ರಾಮಲಿಂಗಪ್ಪ ಟಿ. ಬೇಗೂರು
(29 December 1968)

ವಿಮರ್ಶಕ-ಲೇಖಕ ರಾಮಲಿಂಗಪ್ಪ ಟಿ. ಬೇಗೂರು ಅವರು ಮೂಲತಃ ನೆಲಮಂಗಲ ತಾಲ್ಲೂಕಿನ ತೆಪ್ಪದ ಬೇಗೂರು ಗ್ರಾಮದವರು. 1968ರ ಡಿಸೆಂಬರ್ 29ರಂದು ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಆರು ಚಿನ್ನದ ಪದಕಗಳೊಂದಿಗೆ ಪ್ರಥಮ ರಾಂಕ್‌ನಲ್ಲಿ ಕನ್ನಡ ಎಂ.ಎ. ಪದವಿ. ಬೆಂಗಳೂರು, ಚಳ್ಳಕೆರೆ, ಕುಕನೂರು, ಕೋಲಾರ, ಚಿಂತಾಮಣಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಕೆಂಗೇರಿ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಕಾವ್ಯ, ವಿಚಾರಸಾಹಿತ್ಯ, ಸಂಶೋಧನೆ, ವಿಮರ್ಶೆಗಳಲ್ಲಿ ಪರಿಶ್ರಮ ಇರುವ ಇವರಿಗೆ ಜಿ.ಎಸ್.ಎಸ್. ಕಾವ್ಯಪ್ರಶಸ್ತಿ ಲಭಿಸಿದೆ. ’ಮಾಯಾಪಾತಾಳ’,’ಸಂಕರಬಂಡಿ’, ಮಾರ್ಗಾಂತರ, ಪರಕಾಯ, ಎಡ್ವರ್ಡ್ ಸೈದ್, ಅಲ್ಲಮಪ್ರಭು : ಆಧುನಿಕ ಪೂರ್ವ ಅನುಸಂಧಾನಗಳು ಮೊದಲಾದವು ಪ್ರಕಟಿತ ...

READ MORE

Conversation

Related Books