ಮೇಜರ್ ಸಂದೀಪ್ ಹತ್ಯೆ

Author : ರವಿ ಬೆಳಗೆರೆ

Pages 210

₹ 150.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

2008 ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ಕರ್ನಾಟಕದ ಮೇಜರ್ ಸಂದೀಪ್ ಉನ್ನೀಕೃಷ್ಣನ್ ಅವರ ಕುರಿತು ಬರೆದಂತಹ ಕೃತಿ ಮೇಜರ್ ಸಂದೀಪ್ ಹತ್ಯೆ. 26ರಿಂದ 29ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಪೊಲೀಸ್ ಪಡೆ ಹಾಗೂ ಕಮ್ಯಾಂಡೋ ಪಡೆಗಳ ನಿರಂತರ ಪರಿಶ್ರಮದ ಕ್ಷಣ ಕ್ಷಣದ ವಿವರಗಳನ್ನು ಕೂಡ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಉಗ್ರರ ದಾಳೀ ಯಾವ ರೀತಿ ನಡೆಯಿತು, ದಾಳಿಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಯಾವ ರೀತಿ ನಡೆಯಿತು ಮತ್ತು ಆ ಸಂಧರ್ಭದಲ್ಲಿ ಪೊಲೀಸ್ ಮತ್ತು ಕಮ್ಯಾಂಡೋ ಪಡೆಗಳು ತೋರಿದ ಸಾಹಸಗಳ ಕುರಿತು ರೋಚಕವಾಗಿ ವಿವರಿಸಿದಂತಹ ಕೃತಿ ಇದು. ಯಾವ ರೀತಿ ಭಾರತದ ರಕ್ಷಣಾ ಪಡೆಗಳು ತಮ್ಮ ಜೀವವನ್ನು ಪಣಕ್ಕಿಟ್ಟು ನಾಗರೀಕರ ರಕ್ಷಣೆಗೆ ಕಟಿಬದ್ಧರಾಗಿರುತ್ತಾರೆ ಎಂಬುದರ ವಿವರಣೆ ಈ ಪುಸ್ತಕದಲ್ಲಿ ಕಾಣಬಹುದು. ಪ್ರಮುಖವಾಗಿ ಈ ಪುಸ್ತಕವು ದಾಳಿಯಲ್ಲಿ ಹತರಾದ ಸಂದೀಪ್ ಉನ್ನೀಕೃಷ್ಣನ್‍ರ ಧೈರ್ಯ ಮತ್ತು ಸಾಹಸದ ಕುರಿತು ವಿವರಿಸಲಾಗಿದೆ. ತಮ್ಮ ಸಹೋದ್ಯೋಗಿ ಹಾಗೂ ಅಮಾಯಕ ಜನತೆಯ ಪ್ರಾಣ ಕಾಪಾಡಲು ತಮ್ಮ ಪ್ರಾಣ ನೀಡಿದ ಮೇಜರ್ ಸಂದೀಪ್ ಅವರ ಬಲಿದಾನ ಎಲ್ಲಾ ಓದುಗರಿಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಲೇಖಕರು ವಿವರಿಸಿದ್ದಾರೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books