ಮಕ್ಕಳ ರಂಗಭೂಮಿ

Author : ಗಜಾನನ ಶರ್ಮ

Pages 330

₹ 100.00




Year of Publication: 2011
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ. ಸಿ. ರಸ್ತೆ, ಬೆಂಗಳೂರು

Synopsys

ಕನ್ನಡ ಮಕ್ಕಳ ನಾಟಕ ಪರಂಪರೆಯಲ್ಲಿ ಪ್ರಮುಖ ಹೆಸರು ಎಂ.ಎನ್. ಕಾಮತ್‌, ಶಿವರಾಮ ಕಾರಂತ, ಕುವೆಂಪು. ಆದರೂ 1970ರ ದಶಕದಲ್ಲಿ ಬಿ.ವಿ. ಕಾರಂತ, ಎನ್.ಎಸ್. ವೆಂಕಟರಾಮ್ ಅವರ ಪ್ರವೇಶದಿಂದ ಮಕ್ಕಳ ರಂಗಭೂಮಿಗೆ ಹೊಸ ಹುರುಪನ್ನು ಪಡೆಯುವುದರೊಂದಿಗೆ ಹೊಸ ಹೊಸ ಪ್ರಯೋಗಗಳು ನಡೆದವು. ಹೀಗೆ ಮಕ್ಕಳ ನಾಟಕ ಪರಂಪರೆ ನಡೆದು ಬಂದ ದಾರಿ, ಬೇಸಿಗೆ ಶಿಬಿರ, ಕಮ್ಮಟ ವಿಚಾರ ಸಂಕಿರಣ ಮುಂತಾಗಿ ನಡೆದು ಬಂದ ದಾರಿಯ ಅಧ್ಯಯನ ಪೂರ್ವಕ ಲೇಖನ ಸಂಗ್ರಹಗಳ ಕೃತಿ ‘ಮಕ್ಕಳ ರಂಗಭೂಮಿ’. ಗಜಾನನ ಶರ್ಮ ಮತ್ತು ಎಸ್. ವಿ. ಕಶ್ಯಪ್ ಈ ಕೃತಿಯನ್ನು ಸಂಪಾದಿಸಿದ್ದಾರೆ.

 

About the Author

ಗಜಾನನ ಶರ್ಮ

ಡಾ| ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಇವರ ಪ್ರಮುಖ ಕಾದಂಬರಿ.  'ನಾಣಿ ಭಟ್ಟನ ಸ್ವರ್ಗದ ಕನಸು', 'ಗೊಂಬೆ ರಾವಣ', ಆಗ ಮತ್ತು ಸುಂದರಿ', 'ಹಂಚಿನಮನೆ ಪರಸಪ್ಪ', 'ಪುಸ್ತಕ ಪಾಂಡಿತ್ಯ' ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, 'ಕನ್ನಂಬಾಡಿಯ ಕಟ್ಟದಿದ್ದರೆ', 'ದ್ವಂದ್ವ ದ್ವಾಪರ', 'ಬೆಳ್ಳಿಬೆಳಕಿನ ಹಿಂದೆ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ...

READ MORE

Related Books