ಮನದ ಮುಂದಣ ಮಾಯೆ

Author : ಗಿರೀಶ ಜಕಾಪುರೆ

Pages 80

₹ 80.00




Year of Publication: 2019
Published by: ಪೂರ್ವಶ್ರೀ ಪ್ರಕಾಶನ
Address: ಶಾರದಾ ನಿವಾಸ, ಪೋ-ಮೈಂದರ್ಗಿ, ಜಿ:ಸೊಲ್ಲಾಪುರ, ಮಹಾರಾಷ್ಟ್ರ
Phone: 9860838605

Synopsys

ಗಜಲ್ ಉರ್ದು ಕಾವ್ಯದ ರಾಣಿ. ಇದೊಂದು ಹಾಡುಗಬ್ಬ. ಮಾನವ ಜೀವನದ ಎಲ್ಲ ಸಂವೇದನೆಗಳನ್ನು ಅತ್ಯಂತ ಕಡಿಮೆ ಶಬ್ದಗಳಲ್ಲಿ ಪರಿಣಾಮಕಾರಿಯಾಗಿ ಹೇಳಬಲ್ಲ ಸಾಮರ್ಥ್ಯ ಇರುವುದು ಗಜಲ್ ಕಾವ್ಯಕ್ಕೆ ಮಾತ್ರ ಎಂದು ಹೇಳಬಹುದು. ಉರ್ದು ಭಾಷೆಯಲ್ಲಿ ಹುಟ್ಟಿ ಬೆಳೆದ ಈ ಛಂದಸ್ಸು ಬರಬರುತ್ತ ವಿವಿಧ ಭಾರತೀಯ ಭಾಷೆಗಳನ್ನು ತನ್ನತ್ತ ಸೆಳೆಯಿತು. 80 ರ ದಶಕದಲ್ಲಿ ಕನ್ನಡವನ್ನೂ ತನ್ನ ಭವ್ಯಪರಂಪರೆಯ ಒಳಪಡಿಸಿಕೊಂಡಿತು. ಅಂದಿನಿಂದ ಇಂದಿನವರೆಗೆ ಹಲವಾರು ಗಜಲ್ ಸಂಕಲನಗಳು ಬಂದಿವೆ. ಆದರೆ ಗಜಲ್ ಉರ್ದುವಿನಲ್ಲಿ ನೀಡುವ ಚಮತ್ಕಾರಿಕ ಕಾವ್ಯಪರಿಣಾಮವನ್ನು ಕನ್ನಡದಲ್ಲಿ ತರಲು ಸಾಧ್ಯವಾಗಿತ್ತಿಲ್ಲ ಎಂಬ ದನಿ ಕೇಳಿ ಬರುತ್ತಿತ್ತು.

ಈ ಸಂಕಲನದ ಸಂದರ್ಭದಲ್ಲಿ ಉರ್ದುವಿನ ಈ ಛಂದಸ್ಸನ್ನು ಶುದ್ಧವಾಗಿ, ಶಾಸ್ತ್ರೋಕ್ತವಾಗಿ ಕನ್ನಡದಕ್ಕೆ ಅಳವಡಿಸಿಕೊಳ್ಳುವ ಯತ್ನ ಮಾಡಲಾಗಿದ್ದು ಗೇಯತೆಯನ್ನು ಉಳಿಸಿಕೊಳ್ಳಲಾಗಿದೆ. ಇಲ್ಲಿನ ಎಲ್ಲ ಗಜಲ್‌ಗಳು ಮಾತ್ರಾಗಣದಲ್ಲಿ ಇರುವುದರಿಂದ ಗಾಯನಕ್ಕೆ ಸಹಜವಾಗಿ ರಾಗ ತಾಳಕ್ಕೊಳಪಡುತ್ತವೆ. ಉರ್ದು ಗಜಲ್ ನೀಡುವ ಚಮತ್ಕಾರಿಕ ಅರ್ಥವನ್ನು ಇಲ್ಲಿನ ಕನ್ನಡಗಜಲ್‌ಗಳು ನೀಡುತ್ತವೆ. ಬದುಕಿನ ನೋವು, ನಲಿವು, ಸೋಲು, ಹತಾಶೆ, ಪ್ರೇಮ, ವಿರಹ, ಮೋಸ, ದೇಶ, ದೇವ, ಧರ್ಮ, ನಂಬಿಕೆ ಎಲ್ಲವೂ ಈ ಸಂಕನಲದಲ್ಲಿನ ಗಜಲ್‌ಗಳ ಕೇಂದ್ರವಸ್ತು.

ಈ ಸಂಕಲನದಲ್ಲಿ ಮುರದ್ಧಫ್, ಗೈರ್‌ಮುರದ್ಧಫ್ ಮತ್ತು ಮುಸಲ್‌ಸಲ್, ಗೈರ್ ಮುಸಲ್‌ಸಲ್ ಪ್ರಕಾರದ ಗಜಲ್‌ಗಳಿವೆ. ಕಡಿಮೆ ಶಬ್ದಗಳಲ್ಲಿ ಹೆಚ್ಚಿನ ಅರ್ಥಗಳನ್ನು ನೀಡುವ ಹಲವಾರು ಶಾಹಿರಿಗಳು ಇಲ್ಲಿದ್ದು ರೂಪಕ, ಪ್ರತಿಮೆಗಳಲ್ಲಿಯೇ ಭಾವವನ್ನು ಹಿಡಿಯಲಾಗಿದೆ.

About the Author

ಗಿರೀಶ ಜಕಾಪುರೆ
(09 September 1981)

ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ‌ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...

READ MORE

Related Books