ಮನದ ವಚನಗಳು

Author : ಸತೀಶಕುಮಾರ ಹೊಸಮನಿ

Pages 88

₹ 75.00




Year of Publication: 2020
Published by: ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ
Address: ಸರಸ್ವತಿ, ಗೋದಾಮ, ಕಲಬುರ್ಗಿ
Phone: 9448124431

Synopsys

‘ಮನದ ವಚನಗಳು’ ಲೇಖಕ ಡಾ.ಸತೀಶ ಕುಮಾರ್ ಹೊಸಮನಿ ಅವರ ಆಧುನಿಕ ವಚನಗಳ ಸಂಕಲನ. ಗ್ರಂಥಾಲಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸತೀಶ ಕುಮಾರ್ ಹೊಸಮನಿ ತಮ್ಮ ಖೇಳಗಿಯ ಆರಾಧ್ಯದೈವ ಶ್ರೀಶಿವಲಿಂಗೇಶ್ವರ ಅಂಕಿತನಾಮವಾಗಿಸಿಕೊಂಡು ವಚನಗಳನ್ನು ರಚಿಸಿದ್ದಾರೆ.

ತಮ್ಮ ನೆಲ ಮೂಲದ ದೈವ ಸಂಸ್ಕೃತಿಯನ್ನು ಸಿಲಿಕಾನ್ ಸಿಟಿಯಲ್ಲಿದ್ದರೂ ನೆನಪಿಸಿಕೊಂಡು ಆರಾಧಿಸಿದ್ದು ಕಂಡು ಬರುತ್ತದೆ. ಇಲ್ಲಿಯ ವಚನಗಳಲ್ಲಿ ವೈವಿಧ್ಯತೆ ಇದೆ. ಹತ್ತು ಹಲವು ವಸ್ತು ವಿಷಯಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಹೊಸಮನಿ ಅವರ ವಚನಗಳು ಸಹಜತೆಯಿಂದ ಕೂಡಿವೆ. ಜಾತಿ ಪದ್ಧತಿ, ಅಸ್ಪೃಶ್ಯತೆ, ಅವಮಾನಗಳನ್ನು ನೇರವಾಗಿ ಹೇಳಿದ್ದಾರೆ. ಇಲ್ಲಿಯ ವಚನಗಳಲ್ಲಿ ಅಸಮಾನತೆಯನ್ನು ಪ್ರಶ್ನಿಸಿದ್ದಾರೆ. ಒಡಲಾಳದ ನೋವುಗಳನ್ನೂ ಹಂಚಿಕೊಂಡಿದ್ದಾರೆ.

About the Author

ಸತೀಶಕುಮಾರ ಹೊಸಮನಿ

ಸತೀಶಕುಮಾರ ಹೊಸಮನಿ ಅವರು ಗ್ರಂಥಾಲಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಹತ್ತಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಪ್ರವಾಸಕಥನ, ಕಾವ್ಯ, ಗ್ರಂಥಾಲಯ ಮಾಹಿತಿ ಹೊಂದಿದ ಅನೇಕ ಕೃತಿಗಳು ಆಕರಗಳಾಗಿವೆ. ಹತ್ತು ಹಲವು ಸಂಘ ಸಂಸ್ಥೆಗಳು ಇವರಿಗೆ ಐವತ್ತಕ್ಕೂ ಹೆಚ್ಚು ಪ್ರಶಸ್ತಿ ಗೌರವ ನೀಡಿವೆ. ಕಲ್ಯಾಣ ಪ್ರಭೆ ಎಂಬ ಅಭಿನಂದನ ಗ್ರಂಥ ಅರ್ಪಿಸಲಾಗಿದೆ. ...

READ MORE

Related Books