ಮನರಂಜನೆಗಾಗಿ ಬೀಜಗಣಿತ

Author : ಅಡ್ಡೂರು ಕೃಷ್ಣರಾವ್

Pages 196

₹ 80.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560009
Phone: 08022161900

Synopsys

ಬೀಜಗಣಿತ ಕುರಿತಂತೆ ರಷ್ಯಾದ  ಯಾಕೊವ್ ಪೆರೆಲ್ಮನ್ ಅವರ ಕೃತಿಯನ್ನು ಅಡ್ಡೂರು ಕೃಷ್ಣರಾವ್ ಅನುವಾದಿಸಿರುವ ಕೃತಿ-ಮನರಂಜನೆಗಾಗಿ ಬೀಜಗಣಿತ.  ಯಾಕೊವ್ ಪೆರೆಲ್ಮನ್  ಅವರ ಬೀಜಗಣಿತವನ್ನು ಏಳು ಕ್ರಿಯೆಗಳ ಅಂಕಗಣಿತವೆಂದು ಪರಿಗಣಿಸಲಾಗಿದೆ. ಕಬ್ಬಿಣದ ಕಡಲೆ ಎಂಬಂತಹ ಬೀಜಗಣಿತವನ್ನು ಸಹ್ಯವಾಗುವಂತೆ ಮನರಂಜನೆಯ ಮೂಲಕ ಪ್ರಸ್ತುತಪಡಿಸಿರುವುದು ಇಲ್ಲಿನ ವಿಶೇಷ.

 ವಿವಿಧ ಡಯೊಫಾಂಟೈನ್ ಸಮೀಕರಣಗಳು, ಲಾಗರಿತಂ ಕೋಷ್ಟಕಗಳು, ಖಗೋಳಶಾಸ್ತ್ರದಲ್ಲಿ ಉಪಯೋಗವಾಗುವ ಬೀಜಗಣಿತದ ಘಾತಗಳು ಮಾತ್ರವಲ್ಲದೆ ದೈನಂದಿನ ವ್ಯವಹಾರದಲ್ಲೂ ಎದುರಾಗುವ ಸಮಸ್ಯೆಗಳನ್ನಿಲ್ಲಿ ಸರಳವಾದ ವಿಧಾನದಲ್ಲಿ ಬಿಡಿಸಿಡಲಾಗಿದೆ. ಸಂಕೀರ್ಣ-ಬೃಹತ್ ಗಾತ್ರದ ಸಮಸ್ಯೆಗಳಿಗೆ ಬೀಜಗಣಿತದಲ್ಲಿ ಉತ್ತರವಿದೆಯೆಂದು ಅರಿಯಬಹುದು. ಮೂಲ ಕೃತಿಯು ವಿಶ್ವದ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. 

About the Author

ಅಡ್ಡೂರು ಕೃಷ್ಣರಾವ್

ಲೇಖಕ ಅಡ್ಡೂರು ಕೃಷ್ಣರಾವ್ ಅವರು ಸದ್ಯ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃಷಿ ಸಂಪದದ ಸಂಪಾದಕರು. ಸಾವಯವ ಕೃಷಿ ಬಳಗದ ಅಧ್ಯಕ್ಷರು. ದಿನಪತ್ರಿಕೆಯ ಅಂಕಣಕಾರರು. ಕೃಷಿ ತರಬೇತುದಾರರು. ಬ್ಯಾಂಕ್ ವ್ಯವಹಾರ ತಜ್ಞರು. ಗ್ರಾಹಕರ ವೇದಿಕೆ ಸಂಚಾಲಕರು.  ಕೃತಿಗಳು: ಮನರಂಜನೆಗಾಗಿ ಬೀಜಗಣಿತ (ಅನುವಾದಿತ ), ಎಂಬತ್ತರ ಕೊಯ್ಲಿನ ಕಾಳುಗಳು : ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ , ಹಸುರು ಹೆಜ್ಜೆ (ಅಂಕಣ ಬರಹ),  ಮ್ಯಾನುವಲ್ ಓನ್ ಬ್ಯಾಂಕಿಂಗ್  (ಸಂಪಾದಿತ ಕೃತಿ), ಇಂಗ್ಲಿಷ್ ಮೇಡ್ ಈಸೀ  (ಸಂಪಾದಿತ ಕೃತಿ), ಮೋಜಿನ ಗಣಿತ (ಮೂಲ:"ಫಿಗರ್ಸ್ ಫಾರ್ ಫನ್" ಇಂಗ್ಲಿಷ್),  ಜನಜಾಗೃತಿಯ ಸಾಧನ: ಮಾಹಿತಿ ಮಂಥನ,  ಬಳಕೆದಾರರ ಸಂಗಾತಿ,  ಟೂರಿಸ್ಟ್ ಗೈಡ್ - ದಕ್ಷಿಣ ಕನ್ನಡ, ಉಡುಪಿ, ಕೊಡಗು ಕಾಸರಗೋಡು ಜಿಲ್ಲೆಗಳು ...

READ MORE

Related Books