ಮಾನವ ಎಚ್ಚೆತ್ತಾಗ

Author : ಸರಸ್ವತಿ ಗಜಾನನ ರಿಸಬೂಡ

₹ 150.00




Year of Publication: 2021
Published by: ಕ್ರಿಯಾ ಪ್ರಕಾಶನ
Address: ಸುರಿಭವನ, 16ನೇ ಅಡ್ಡರಸ್ತೆ, 2ನೇ ಬಿ ಮುಖ್ಯರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027
Phone: 22234369

Synopsys

ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿ ಗೋದಾವರಿ ಪರುಳೇಕರ್‌ ಅವರ ʻಜುವಾ ಮನುಸ್ ಜಗಾ ಹೋಟೊʼ ಅನ್ನುವ ಮರಾಠಿ ಕೃತಿಯ ಕನ್ನಡ ಅನುವಾದ ʻಮಾನವ ಎಚ್ಚೆತ್ತಾಗʼ. ಸರಸ್ವತಿ ರಿಸಬುಡ್‌ ಅವರು ರೂಪಾಂತರಿಸಿದ್ದಾರೆ. 1970ರಲ್ಲಿ ಬಿಡುಗಡೆಯಾದ ಮೂಲ ಕೃತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದೆ. ಪ್ರಸ್ತುತ ಪುಸ್ತಕ ಏಳು ದಶಕಗಳ ಹಿಂದೆ ಜೀತ ಪದ್ಧತಿಯನ್ನು ನಿರ್ಮೂಲನೆ ಗೊಳಿಸುವಲ್ಲಿ ಯಶಸ್ವಿಯಾದ ವಾರಲೀ ಆದಿವಾಸಿ ಜನಗಳ ಹೋರಾಟದ ಕಥೆಯನ್ನು ಹೇಳುತ್ತದೆ. ನೂರಾರು ವರ್ಷಗಳಿಂದ ಜಮೀನ್ದಾರ್, ಭೂಮಾಲೀಕರ ಕ್ರೌರ್ಯವನ್ನು ಬಾಯಿ ಮುಚ್ಚಿ ಒಪ್ಪಿಕೊಂಡು ಶೋಚನೀಯ ಹಾಗೂ ಅಸಹ್ಯಕರ ಬದುಕು ನಡೆಸುತ್ತಿದ್ದ ಆಗಿನ ಮುಂಬೈ ಪ್ರಾಂತದ ಠಾಣೆ ಜಿಲ್ಲೆಯ ವಾರಲೀ ಆದಿವಾಸಿ ಸಮುದಾಯ ಎಚ್ಚರಗೊಳ್ಳುವವರೆಗಿನ ಹೋರಾಟದ ಚರಿತ್ರೆಯ ಕುರಿತು ಗೋದಾವರಿ ಪರುಳೇಕರ್ ವಿವರಿಸುತ್ತಾರೆ. ಹೀಗೆ ತಮಗೆ ಹಾಕಿದ ಗಡಿಯನ್ನು ಕಿತ್ತೆಸೆಯಬಲ್ಲ, ಜೀವ ಹಿಂಡುವ ವ್ಯವಸ್ಥೆಯನ್ನು ಬದಲಿಸಬಲ್ಲ, ಗುಲಾಮಗಿರಿಗೆ ಕೊನೆ ಹಾಡಬೇಕೆಂದು ಹಾತೊರೆಯುತ್ತಿದ್ದ ಈ ಬಡಪಾಯಿಗಳ ನೋವಿನ, ಕಿಚ್ಚಿನ ಕತೆ ಚರಿತ್ರೆಯುದ್ದಕ್ಕೂ ಮೈಲುಗಲ್ಲಾಗಿ ನಿಂತಿದೆ. ಮೂಲ ಕೃತಿ ಇಂಗ್ಲೀಷ್‌, ಜಪಾನೀಸ್‌ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ.

About the Author

ಸರಸ್ವತಿ ಗಜಾನನ ರಿಸಬೂಡ
(31 December 1931 - 25 August 2021)

ಸರಸ್ವತಿ ಗಜಾನನ ರಿಸಬೂಡ, ಬಿ.ಎ. ಪದವಿ ಪಡೆದವರು. ಇವರು ಜನಿಸಿದ್ದು 1931ರ ಡಿಸೆಂಬರ್‌ 31ರಂದು ಧಾರವಾಡದಲ್ಲಿ. ತಂದೆ ದತ್ತಾತ್ರೇಯ ವೆಂಕಟೇಶ ದಿವಾಕರ, ತಾಯಿ- ಸರಸ್ವತಿ . ಯುಗಾಂತ, ಮಾನವ ಎಚ್ಚೆತ್ತಾಗ, ಭಾರತೀಯ ಮುಸಲ್ಮಾನರು, ವಾಲ್ಮೀಕಿ ರಾಮಾಯಣ-ವರ ಮತ್ತು ಶಾಪ, ಭಾರತದ ಸ್ವತಂತ್ರ್ಯ ಸಂಗ್ರಾಮ, ಸ್ತ್ರೀಪುರುಷ ಇವರ ಅನುವಾದಿತ ಕೃತಿಗಳು ಪ್ರಕಟವಾಗಿದೆ. ...

READ MORE

Related Books