ಮನೆಕೆಲಸ ಮತ್ತು ಹೊರಗಿನ ಕೆಲಸ

Author : ಬಿ. ಸುಜ್ಞಾನಮೂರ್ತಿ

Pages 114

₹ 80.00




Year of Publication: 2018
Published by: ಲಡಾಯಿ ಪ್ರಕಾಶನ
Address: ನಂ 21, ಪ್ರಸಾದ್ ಹಾಸ್ಟೆಲ್, ಗದಗ
Phone: 9480286844

Synopsys

ಹೊರಗೆ ಕಚೇರಿಯಲ್ಲಿ ದುಡಿಯುವ ಹೆಣ್ಣು, ಮನೆಯಲ್ಲಿ ಮತ್ತೆ ಮನೆಗೆಲಸ ಮಾಡಬೇಕಾಗುತ್ತದೆ. ಅಂದರೆ ಎರಡೆರಡು ದುಡಿಮೆ. ಈ ನಿಟ್ಟಿನಲ್ಲಿ, ಮನೆಯಲ್ಲಿರುವ ಹೆಣ್ಣಿಗಿಂತ ಹೊರಗೆ ದುಡಿಯುವ ಹೆಣ್ಣೆ ಹೆಚ್ಚು ಶೋಷಿತಳಲ್ಲವೆ? ಮನೆಗೆಲಸವನ್ನು ಗಂಡು-ಹೆಣ್ಣು ಸಮಾನವಾಗಿ ಹಂಚಿ ಮಾಡುವ ಮನಸ್ಥಿತಿ ಭಾರತದಲ್ಲಿ ಯಾಕೆ ಇನ್ನೂ ಬೆಳೆದಿಲ್ಲ? ಹೀಗೆ ಹೆಣ್ಣಿನ ದುಡಿಮೆಯ ಕುರಿತಂತೆ ಹತ್ತು ಹಲವು ಪ್ರಶ್ನೆಗಳನ್ನು ಇಟ್ಟು ಉತ್ತರಕ್ಕಾಗಿ ತಡಕಾಡುತ್ತದೆ, ರಂಗನಾಯಕಮ್ಮ ಬರೆದಿರುವ 'ಮನೆಕೆಲಸ ಮತ್ತು ಹೊರಗಿನ ಕೆಲಸ', ತೆಲುಗು ಮೂಲದ ಈ ಕೃತಿಯನ್ನು ಬಿ. ಸುಜ್ಞಾನ ಮೂರ್ತಿ ಕನ್ನಡಕ್ಕೆ ತಂದಿದ್ದಾರೆ. ಸಂಬಳ, ಕೂಲಿ ಇಲ್ಲದ ಕೆಲಸ ದುಡಿಮೆಯೇ ಅಲ್ಲ ಎಂದು ಭಾವಿಸುವ ಸಮಾಜದಲ್ಲಿ ಮನೆಕೆಲಸ ಮಾಡುವ ಹೆಣ್ಣು ಸಹಜವಾಗಿಯೇ ಶೋಷಣೆಗೆ ಒಳಪಡುತ್ತಾಳೆ ಎಂದು ಈ ಕೃತಿ ಹೇಳುತ್ತದೆ.

ಗರ್ಭ ಧರಿಸಿದ ಕಾಲಾವಧಿ, ಬಾಣಂತಿಯರಾದ ಸಮಯ, ಮಕ್ಕಳ ಲಾಲನೆ, ಪೋಷಣೆ, ಮನೆಯ ಒಳಗಿನ ನಿರ್ವಹಣೆ, ಅಡುಗೆಯ ಕಲೆ, ಒಪ್ಪ ಓರಣದ ಕಸುಬುದಾರಿಕೆ ಇವೆಲ್ಲವೂ ಮಹಿಳೆಯ ದುಡಿಮೆಯ ಭಾಗವೇ ಆಗಿದ್ದರೂ, ಪುರುಷ ದೃಷ್ಟಿಕೋನದಲ್ಲಿ ಇವು ಯಾವುದೂ ಕೆಲಸವೇ ಅಲ್ಲ. ಶ್ರಮ ಮತ್ತು ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಕೃತಿಯನ್ನು ಬರೆಯಲಾಗಿದೆ. ಶ್ರಮದ ಬೇರೆ ಬೇರೆ ವಿಭಾಗಗಳನ್ನು ಲೇಖಕಿ ಗುರುತಿಸುತ್ತಾರೆ. 

 

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Related Books