ಮಣ್ಣಿನ ಮೆರವಣಿಗೆ

Author : ಚೆನ್ನವೀರ ಕಣವಿ

Pages 60

₹ 40.00




Year of Publication: 1960
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಸಂ. 9, ’ರಮ್ಯ’, ಗೋಕುಲಂ, 3ನೆಯ ಹಂತರ, ಮೈಸೂರು
Phone: 2513821/9880749412

Synopsys

ಕಣವಿಯವರ ಆರನೆಯ ಸಂಕಲನವಾದ ’ಮಣ್ಣಿನ ಮೆರವಣಿಗೆ’ಯು ಅವರ ಕಾವ್ಯದ ದಾರಿ ಬದಲಾದದ್ದನ್ನು ಸ್ಪಷ್ಟವಾಗಿ ದಾಖಲಿಸುತ್ತದೆ. ನವ್ಯತೆಯ ಆವಿಷ್ಕಾರ ಕಣವಿಯವರಿಗೆ ಈ ಸಂಕಲನದಲ್ಲಿ ಸಾಧ್ಯವಾಗಿದೆ. ಕಣವಿಯವರು ಈ ಸಂಕಲನದಲ್ಲಿ ಅಭಿವ್ಯಕ್ತಿಯಲ್ಲಿ ಹೊಸತನ ಸಾಧಿಸಿದ್ದಾರೆ. ಈ ಸಂಕಲನದಲ್ಲಿ 9 ಕವಿತೆಗಳಿವೆ.

ಎರಡು ಮಹಾಯುದ್ಧಗಳ ನಂತರ ಜಗತ್ತಿಗೆ ಆವರಿಸಿದ ಹತಾಶೆ, ನೋವು ಯಾತನೆ, ಮಾನವ ಕುಲದ ಸಂಕಟ, ಅಸಹಾಯಕತೆಗಳನ್ನು ಈ ಸಂಕಲನದ ಕವಿತೆಗಳು ಕಟ್ಟಿಕೊಡುತ್ತವೆ. ವಾಸ್ತವ ಬದುಕಿಗೆ ಸ್ಪಂದಿಸುವ ಕವಿ ಅದನ್ನು ಎಚ್ಚರದಿಂದ ಕಟ್ಟಿಕೊಟ್ಟದ್ದು ವಿಶೇಷ.

 

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Related Books