ಮನುಸ್ಮೃತಿ-ಅಪರಾಧ ಶಿಕ್ಷೆ

Author : ಬಿ. ಸುಜ್ಞಾನಮೂರ್ತಿ

Pages 112

₹ 80.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಲೇಖಕರಾದ ಕೆ. ಬಾಲಗೋಪಾಲ್ ಅವರು ಬರೆದಿರುವ ಕೃತಿಯನ್ನು ಕನ್ನಡಕ್ಕೆ ತಂದು ಅನುವಾದಿಸಿದವರು ಬಿ.ಸುಜ್ಞಾನಮೂರ್ತಿ.  

’ಮನುಸೃತಿ ಅಪರಾಧ- ಶಿಕ್ಷೆ’ ಕೃತಿಯು ಮನುಸ್ಮೃತಿ ಪ್ರಾಚೀನ ಭಾರತೀಯ ಸಮಾಜದ ಸಾಮಾಜಿಕ ವಿಧಿ-ನಿಷೇಧಗಳನ್ನು, ನೀತಿ-ನಡವಳಿಯ ಕಟ್ಟುಪಾಡುಗಳನ್ನು ಹೇಳುವ ಕುತೂಹಲಕಾರಿ ಕೃತಿಯಾಗಿದೆ. ಈ ಕೃತಿಯು ವರ್ಣಾಶ್ರಮ ಧರ್ಮವನ್ನು ಸಮಾಜದ ಎಲ್ಲ ವಲಯಗಳಲ್ಲಿ 'ಆಚರಿಸುವುದಕ್ಕೆ ಬಲವಂತ ಪಡಿಸುತ್ತದೆ. ಜಾತಿ ಮತ್ತು ಲಿಂಗಭೇದದ ತಾರತಮ್ಯದ ನೆಲೆಗಟ್ಟಿನಲ್ಲಿ ಭಾರತೀಯ ಸಂಸ್ಕೃತಿಯನ್ನು, ಸಮಾಜವನ್ನು ಕೆಟ್ಟದಾಗಿ, ಕೀಳಾಗಿ, 'ಅಸಹ್ಯವಾಗಿ ಚಿತ್ರಿಸಿದ ಜೀವವಿರೋಧಿ ಕೃತಿಯಾಗಿದೆ.

ಪ್ರಾಚೀನ ಭಾರತದಲ್ಲಿ ವರ್ಣವ್ಯವಸ್ಥೆಯನ್ನು ಸ್ಥಾಪಿಸಿದ, ಶಾಶ್ವತಗೊಳಿಸಿದ, ಆ ಮೂಲಕ ವೈದಿಕಶಾಹಿಯ ಮೇಲೆಯನ್ನು ಮೆರೆಸುವ ಮಾನವವಿರೋಧಿ ಕೃತಿಯೂ ಹೌದು. ಸಾಮಾಜಿಕ ತರತಮವನ್ನು, ಸಂಘರ್ಷವನ್ನು ಸಮಾಜದ ಮನೋಭಿತ್ತಿಯಲ್ಲಿ ಮಾನಸಿಕ ಹಿಂಸೆಯ ಮೂಲಕ, ಭೌತಿಕ ಹಿಂಸೆಯ ಮೂಲಕ ಬಿಂಬಿಸುವ ಮನುಪ್ರಣೀತ ಮನಸ್ಸುಗಳು ಸಾವಿರಾರು ವರ್ಷಗಳಿಂದ ಅವಿರತ ಪ್ರಯತ್ನವನ್ನು ಮಾಡುತ್ತಲೇ ಇವೆ.

 

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Related Books