ಮನುಸ್ಮೃತಿ

Author : ಶೇಷ ನವರತ್ನ

Pages 550

₹ 270.00




Year of Publication: 2014
Published by: ಸಮಾಜ ಪುಸ್ತಕಾಲಯ
Address: ಸುಭಾಶ್ ರಸ್ತೆ, ಧಾರವಾಡ

Synopsys

ಸಂಸ್ಕೃತ ಭಾಷೆಯಲ್ಲಿ ಬರೆದ ಮನುಸ್ಮೃತಿಯನ್ನು ಲೇಖಕ ಶೇಷ ನವರತ್ನ ಅವರು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ-ಮನುಸ್ಮೃತಿ. ಹಿಂದೂ ಧರ್ಮದ ಸಂವಿಧಾನವೇ ಎಂಬಂತಿದ್ದ ಆ ಕಾಲದ ಈ ಕೃತಿಯು ಹತ್ತು ಹಲವು ವಿವಾದಗಳನ್ನು ಸೃಷ್ಟಿಸಿದೆ. ಇದರ ಪರಿಹಾರ ಹಾಗೂ ಸಂಶಯಗಳನಿವಾರಣೆಗಾಗಿ ಈ ಕೃತಿಯು ಉತ್ತಮ ಆಕರ ಗ್ರಂಥವಾಗಿದೆ. ಸಾಮಾಜಿಕ ನಿಯಮಗಳ ಹಾಗೂ ಕಟ್ಟುಪಾಡುಗಳ ರೂಪದಲ್ಲಿ ಈ ಕೃತಿಯು ಅಂದಿನ ಸಂವಿಧಾನವೇ ಆಗಿತ್ತು.

 

About the Author

ಶೇಷ ನವರತ್ನ
(05 May 1950 - 15 December 2013)

ಶೇಷ ನವರತ್ನ ಅವರು 1950 ರ ಮೇ 5ರಂದು ಧಾರವಾಡದಲ್ಲಿ ಜನಿಸಿದರು. ಎಂ.ಎ. (ಇಂಗ್ಲಿಷ್) ಪದವೀಧರರು. ಸಾಹಿತ್ಯಕ ಮತ್ತು ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕಜಾಜೂರು ಪಿಯು ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರು.  ಧರ್ಮಗಳು, ಕರ್ಮ ಸಿದ್ದಾಂತ ಮತ್ತು ಪುನರ್ಜನ್ಮ ಮನಸೋಲ್ಲಾಸ, ನಿರ್ಣಯ ಸಿಂಧು, ಮಹಾಭಾರತದಲ್ಲಿ ಧರ್ಮ, ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ (ಸಾಹಿತ್ಯಕ-ತತ್ವಶಾಸ್ತ್ರೀಯ). ಹರೆಯದ ಹುಚ್ಚು, ಊರ್ಮಿಳಾ, ಮಲನಾಡ ಗಿಣಿ, ಮೀರಾಬಾಯಿ (ಕವನ ಸಂಕಲನ).  ಕಬೀರ್, ಸೂರದಾಸ್ ಮುಂತಾದವರ ಕವಿತೆಗಳ ಅನುವಾದ. ಅವರಿಗೆ ವೇದಾಂತರತ್ನ, ಉಜ್ಜನಿ ಸದ್ಧರ್ಮ ಪೀಠ, ಆರ್ಯ ಸಮಾಜ ಮುಂತಾದ ಗೌರವಗಳು ಸಂದಿವೆ. 2013ರ ಡಿಸೆಂಬರ್ 15ರಂದು ನಿಧನರಾದರು. ...

READ MORE

Related Books