ಮರುಳ ಮುನಿಯನ ಕಗ್ಗ

Author : ಎ. ನರಸಿಂಹ ಭಟ್ಟ

Pages 348

₹ 320.00




Year of Publication: 2019
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ ರಸ್ತೆ, ಹುಬ್ಬಳ್ಳಿ-580020

Synopsys

ಹಿರಿಯ ವಿದ್ವಾಂಸ ಡಾ. ಡಿ.ವಿ. ಗುಂಡಪ್ಪ (ಡಿ.ವಿ.ಜಿ) ಅವರ ‘ಮರುಳ ಮುನಿಯನ ಕಗ್ಗ’ ಕೃತಿಯನ್ನು ಅರ್ಥಸಹಿತ ವಿವರಣೆ ನೀಡಿರುವ ಕೃತಿ. ಕಾಸರಗೋಡಿನ ಹಿರಿಯ ವಿದ್ವಾಂಸ ಎ. ನರಸಿಂಹ ಭಟ್ಟರು ಡಿವಿಜಿ ಅವರ ಮರುಳ ಮುನಿಯನ ಕಗ್ಗ ಕೃತಿಗೆ ಅರ್ಥ ವಿವರಣೆ ನೀಡಿದ್ದು ಮಾತ್ರವಲ್ಲ; ಈ ಕೃತಿಯನ್ನು ‘ಸತ್ಯಾರ್ಥಿಯ ಹೃದ್ಗೀತೆ’ ಎಂದೂ ಉಪಶೀರ್ಷಿಕೆ ನೀಡುವ ಮೂಲಕ ಕೃತಿಯ ಮಹತ್ವವನ್ನು ತೋರಿದ್ದಾರೆ. ಈ ಕೃತಿಯಲ್ಲಿ ಬದುಕಿನ ಗಹನ ಚಿಂತನೆ, ಉಪದೇಶಗಳು, ವಾಸ್ತತೆಯ ದರ್ಶನ ಎಲ್ಲವೂ ಒಳಗೊಂಡಿದ್ದು, ಡಿವಿಜಿ ಬರೆದ ಚಿಂತನೆಗಳಿಗೆ ಇವರು ಸರಳವಾದ, ಅರ್ಥಗರ್ಭಿತವಾದ ವಿವರಣೆ ನೀಡಿದ್ದು, ಓದನ್ನು ಪರಿಣಾಮಕಾರಿಯಾಗಿಸುತ್ತದೆ. ಹೆಚ್ಚಿನ ಅರ್ಥವನ್ನು ಅಡಿಟಿಪ್ಪಣಿಗಳ ಮೂಲಕವೂ ನೀಡಿದ್ದಾರೆ.

About the Author

ಎ. ನರಸಿಂಹ ಭಟ್ಟ
(20 August 1931 - 19 February 2022)

ಎ. ನರಸಿಂಹ ಭಟ್ಟರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕದವರು. 1931 ಆಗಸ್ಟ್ 20 ರಂದು ಜನನ. ಕಾಸರಗೋಡಿನಲ್ಲಿ ವಾಸ್ತವ್ಯವಿದ್ದರು. ಬಿ.ಇ.ಬಿ.ಟಿ ಹೈಸ್ಕೂಲ್ ಅಧ್ಯಾಪಕ ಪ್ರಶಿಕ್ಷಣ, ಅಧ್ಯಾಪನ ವಿಷಯ ಇಂಗ್ಲಿಷ್ ಮತ್ತು ಸಾಮಾಜಿಕ ಅಧ್ಯಯನ ಮಾಡಿದ್ದರು.  1954 ಜೂನ್ ನಲ್ಲಿ ಸಹಾಯಕ ಹೈಸ್ಕೂಲು ಅಧ್ಯಾಪಕ  ಸೈಂಟ್ ಜೋಸೆಫ್ಸ್ ಹೈಸ್ಕೂಲು ಬಜಪೆ, ಮುನಿಸಿಪಲ್ ಹೈಸ್ಕೂಲ್ ಹೊಸಪೇಟೆ, ಸೈಂಟ್ ಮೈಕಲ್ಸ್ ಹೈಸ್ಕೂಲು ಮಡಿಕೇರಿ, ಗವರ್ನ್‌ಮೆಂಟ್ ಹೈಸ್ಕೂಲು ಕಾಸರಗೋಡು  ಹಾಗೂ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳಮುನಿಯನ ಕಗ್ಗ ಮತ್ತು ಗೋವಿಂದಪೈಯವರ ಗೊಲ್ಗೊಥಾ ಮತ್ತು ...

READ MORE

Related Books