ಮರಳಿ ಮನೆಗೆ

Author : ರಾಜಾರಾಂ ತಲ್ಲೂರು

Pages 80

₹ 125.00




Year of Publication: 2023
Published by: ಬಹುರೂಪಿ ಪ್ರಕಾಶನ
Address: ಬಸಪ್ಪ ಬಡಾವಣೆ, ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು.
Phone: 7019182729

Synopsys

‘ಮರಳಿ ಮನೆಗೆʼ ಕೃತಿಯು ಹೆಚ್ಚಿನ ಓದಿನ ಬಗ್ಗೆ ಆಸಕ್ತಿ ಹೊಂದಿದ್ದರೂ, ಉನ್ನತ ಶಿಕ್ಷಣಕ್ಕಾಗಿ ದಟ್ಟಾರಣ್ಯದ ಕಾಲುಹಾದಿಯಲ್ಲಿ ನಡೆದು ದೂರದ ಊರಿನಲ್ಲಿ ಇರುವ ಶಾಲೆಗೆ ಹೋಗಿಬರಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದ್ದ ಬಾಲಕನ ಕಥೆಯನ್ನು ಹೇಳುತ್ತದೆ. ಈ ಅನಿವಾರ್ಯತೆಯಿಂದಾಗಿ ಓದನ್ನು ಮೊಟಕುಗೊಳಿಸಿ, ತನ್ನ ಅಣ್ಣನಂತೆ ತಾನೂ ದುಡಿಮೆಗಾಗಿ ದೂರದ ಊರಿಗೆ ವಲಸೆ ಹೋಗುವ ಅನಿವಾರ್ಯತೆಯು ಈ ಬಾಲಕನನ್ನು ಕಂಗೆಡೆಸುತ್ತದೆ. ಈ ಸಂದರ್ಭದಲ್ಲಿ ಆತನ ಮನಸ್ಸಿನಲ್ಲಿ ʻನಾವು ನಮ್ಮದೇ ಶಾಲೆ ಆರಂಭಿಸಿದರೆ ಹೇಗೆ?ʼ ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ಆ ಬಾಲಕ ಕಂಡುಕೊಳ್ಳುವ ಪರಿಹಾರವೇ ಈ ಪುಸ್ತಕದ ತಿರುಳು. ತಾವು ಪ್ರೀತಿಸುವ ಜನರನ್ನು ಮತ್ತೆ ತಮ್ಮ ತವರಿಗೆ ಕರೆತರುವ ನಿಟ್ಟಿನಲ್ಲಿ ಇರುವ ಅವಕಾಶಗಳನ್ನು ಶೋಧಿಸುತ್ತಿರುವ ಸಮರ್ಪಣಾ ಮನೋಭಾವದ, ಬುದ್ಧಿವತ ಹಾಗೂ ಮಹತ್ವಾಕಾಂಕ್ಷೆಯ ಮಕ್ಕಳು ನೆಲೆಸಿರುವ ಧರ್ಮಪುರಿಯ ನಯನಮನೋಹರ ಸಿತ್ತಿಲಿಂಗಿ ಕಣಿವೆಯ ಕಥಾಲೋಕಕ್ಕೆ ಈ ಕೃತಿ ನಮ್ಮನ್ನು ಕೊಂಡೊಯ್ಯುತ್ತದೆ.

About the Author

ರಾಜಾರಾಂ ತಲ್ಲೂರು

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಅಲ್ಲೇ ಪ್ರಾಥಮಿಕ ಶಿಕ್ಷಣ, ಸುರತ್ಕಲ್ಲಿನಲ್ಲಿ ಮಾಧ್ಯಮಿಕ ಮತ್ತು ಪದವಿ ಶಿಕ್ಷಣ ಪೂರ್ಣಗೊಳಿಸಿದ ಅವರು ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದ ಅವರು 2000 ಇಸವಿಯಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿ ಪ್ರಾರಂಭಿಸಿದಾಗ ಅದರ ಸುದ್ದಿ ಸಂಪಾದಕರಾಗಿ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿದರು. 2001ರಲ್ಲಿ ಉದಯವಾಣಿ ಆರೋಗ್ಯ ಪುರವಣಿಯಲ್ಲಿ ಆರಂಭಗೊಂಡಾಗ ಅದರ ಸಂಪಾದಕರಾಗಿ ಸೇವೆಸಲ್ಲಿಸಿದ ಅವರು 2017ರ ತನಕವೂ ಆರೋಗ್ಯವಾಣಿಯ ಸಂಪಾದಕೀಯ ಉಸ್ತುವಾರಿ ನೋಡಿಕೊಂಡರು. ಈ ...

READ MORE

Related Books