ಮರಾಠಿ ವೈಚಾರಿಕ ಲೇಖನಗಳು

Author : ಚಂದ್ರಕಾಂತ ಪೋಕಳೆ

Pages 113

₹ 60.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560096
Phone: 120 - 23183311, 23183312

Synopsys

ಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ಆದ ವೈಚಾರಿಕ ಪಲ್ಲಟಗಳು, ಹೊಸ ವಿಚಾರಗಳು, ಹೊಸ ಸಾಮಾಜಿಕ ಚಳುವಳಿಗಳು ಆರಂಭಗೊಂಡ  ಪರಿಣಾಮದಿಂದ  ಭಾರತದ ವಿವಿಧ ಕಡೆಗಳಲ್ಲಿ ವಿವಿಧ  ರೀತಿಯಲ್ಲಿ ಚಳವಳಿಗಳು ಹುಟ್ಟಿಕೊಳ್ಳಲು ಕಾರಣವಾಯಿತು. ಪೇಶ್ವೆಯ ಕಟ್ಟಕಡೆಯ ತಲೆಮಾರಿನ ದುರಂತವನ್ನು ಮೊದಲ ಲೇಖನದಲ್ಲಿ  ವಿವರಿಸಲಾಗಿದೆ. ಜೋತಿರಾವ್ ಗೋವಿಂದರಾವ್ ಅವರು , ’ಗುಲಾಮಗಿರಿಯ ಪ್ರಸ್ತಾವನೆ’ ಎಂಬ ಲೇಖನದಲ್ಲಿ, ಆಂಗ್ಲರ ಆಗಮನ ದೇಶದಲ್ಲಿ ಹೇಗೆ ಶೂದ್ರರು ಮತ್ತು ದಲಿತರಿಗೆ ಸ್ವಾತಂತ್ರ್ಯವನ್ನು ನೀಡಿತು. ಬ್ರಾಹ್ಮಣರು ಮತ್ತೆ ಬ್ರಿಟಿಷರ ಆಡಳಿತ ವ್ಯವಸ್ಥೆಯಲ್ಲಿ ಆಯಕಟ್ಟಿನ ಜಾಗಪಡೆದುದರಿಂದ ಶೂದ್ರರು ಹೇಗೆ ಬ್ರಾಹ್ಮಣರ ಗ್ರಂಥಗಳ ಮೂಲಕ ಮಾನಸಿಕ ದಾಸರಬೇಕಾಯಿತು ಎಂಬುದನ್ನು  ವಿವರಿಸಲಾಗಿದೆ. ಹತ್ತೊಂಬತ್ತನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಮಂಡಿತವಾದ ಹಲವು ವಿಚಾರಧಾರೆಗಳ, ಚಿಂತನೆಗಳ ಸ್ವರೂಪವನ್ನು ಇಲ್ಲಿ ಚಿತ್ರಿಸಲಾಗಿದೆ. ಕನ್ನಡಕ್ಕೆ ’ಚಂದ್ರಕಾಂತ ಪೋಕಳೆ’  ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 

 

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books