ಮಾರ್ಗ-೩

Author : ಎಂ.ಎಂ. ಕಲಬುರ್ಗಿ

Pages 510

₹ 450.00




Year of Publication: 1997
Published by: ಸಪ್ನಾ ಬುಕ್ ಹೌಸ್

Synopsys

ಸಂಶೋಧಕ-ವಿದ್ವಾಂಸ ಎಂ.ಎಂ. ಕಲಬುರ್ಗಿ ಅವರ ಲೇಖನಗಳ ಸಂಪುಟಗಳ ಮೂರನೇ ಸಂಪುಟ ಇದು.  ಪ್ರಸಕ್ತ ಸಂಪುಟದಲ್ಲಿ ಪ್ರಬಂಧ, ಚಿಂತನ, ನಿರ್ವಚನ, ಪ್ರಸ್ತಾವನೆ ಎಂಬ ನಾಲ್ಕು ವಿಭಾಗಗಳಿವೆ.

ಪ್ರಾಚೀನ ಕನ್ನಡ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಆಧುನಿಕ ಕನ್ನಡ ಸಾಹಿತ್ಯ ಎಂಬ ನಾಲ್ಕು ಘಟ್ಟಗಳಲ್ಲಿ ಸಂಭವಿಸಿದ ಚಳುವಳಿ, ಪ್ರತಿಭಟನೆ, ಅಭಿನವ ಪಂಪನ ಅನನ್ಯತೆ, ಜೈನ, ವೀರಶೈವ ಧರ್ಮಗಳ ವಿಲಕ್ಷಣತೆ, ಪ್ರಾಚೀನ ಕರ್ನಾಟಕದಲ್ಲಿ ದೇವಾಲಯಗಳ ನಾಶದ ವಿಚಾರ, ಫ್ಲೀಟ್ ಸಂಗ್ರಹಿಸಿದ ಸ್ವಾತಂತ್ರ್ಯಸಮರದ ಲಾವಣಿ ಸಾಹಿತ್ಯ, ಕೆಳದಿ ಮತ್ತು ಸ್ವಾಧಿ ಸಂಸ್ಥಾನಗಳ ವಿಚಾರ, ನಾಟಕ, ಗೋವಿಂದಪೈ, ಹರ್ಡೇಕರ್ ಮಂಜಪ್ಪ, ಶಾತಿರಾಜ ಶಾಸ್ತ್ರಿಗಳ ಸಂಶೋಧನೆ, ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಗಳಿವೆ.

ಚಿಂತನ ವಿಭಾಗದಲ್ಲಿ ಪಂಪನ ಧರ್ಮ, ಚಂಪೂ, ಪ್ರಬಂಧ ಮತ್ತು ಪ್ರಸಂಗ ಕುರಿತು ಚರ್ಚೆ, ಕೆಲವು ಜನಪದ ಆಚರಣೆಗಳು, ಕಲ್ಯಾಣದ ಕಟ್ಟುವಿಕೆಗೆ ಸಂಬಧಿಸಿದ ವಿಚಾರ, ತೊಳ್ಕಾಪ್ಪಿಯಂ ಹಾಗೂ ಕವಿರಾಜಮಾರ್ಗ ಕೃತಿಗಳ ಸ್ವರೂಪ ಕುರಿತ ಲೇಖನಗಳಿವೆ.

ಮೂರನೆಯ ಅಧ್ಯಯನ ವಿಭಾಗದಲ್ಲಿ ಶರಣರು, ಶರಣ ಸಾಹಿತ್ಯ, ಆ ಸಾಹಿತ್ಯದಲ್ಲಿ ಪ್ರಯೋಗಗೊಂಡಿರುವ ವಿಶಿಷ್ಟ ಪರಿಭಾಷೆ, ಪರಿಕಲ್ಪನೆಗಳ ಚರ್ಚೆ, ವಿವೇಚನೆ, ವಿಶ್ಲೇಷಣೆಗಳಿವೆ.

ಪ್ರಸ್ತಾವನೆ ಎಂಬ ನಾಲ್ಕನೆಯ ಭಾಗದಲ್ಲಿ ಶರಣರು, ವಚನ ಸಾಹಿತ್ಯ, ವ್ಯಾಕರಣ ಕೃತಿ, ಸಾಂಗತ್ಯ ಕೃತಿ, ಕೈಫಿಯತ್ ಮುಂತಾದ ಸಂಪಾದಿತ ಕೃತಿಗಳಿಗೆ ಬರೆದ ಮೌಲಿಕ ಪ್ರಸ್ತಾವನೆಗಳನ್ನು ಸಂಗ್ರಹಿಸಲಾಗಿದೆ. 
ಈ ಗ್ರಂಥವನ್ನು 1997ರಲ್ಲಿ ಎಸ್ ಬಿ. ಎಸ್ ಪಬ್ಲಿಷರ್, & ಡಿಸ್ಟ್ರಿಬ್ಯೂಟರ್ಸ, ಬೆಂಗಳೂರು ಮೊದಲಿಗೆ ಪ್ರಕಟಿಸಿತ್ತು. ನಂತರದ ಆವೃತ್ತಿಗಳನ್ನು ಸಪ್ನ ಬುಕ್ ಹೌಸ್, ಬೆಂಗಳೂರು ಪ್ರಕಟಿಸಿದೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books