ಮರುಭೂಮಿ ಚಿಗುರಿತು

Author : ಮತ್ತಿಹಳ್ಳಿ ನಾಗರಾಜರಾವ್

Pages 272

₹ 60.00




Year of Publication: 2000
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಮತ್ತಿಹಳ್ಳಿ ನಾಗರಾಜರಾವ್ ರವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ರಾಮಯ್ಯ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತರು. ಲೇಖಕರು ಇಸ್ರೇಲ್ ಇತಿಹಾಸದ ಕುರಿತು ಈ ಕೃತಿಯಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ. ಇಸ್ರೇಲ್ ಮೆಡಿಟರೇನಿಯನ್ ಮತ್ತು ಸಮುದ್ರದ ಆಗ್ನೇಯಕ್ಕೆ ಪಶ್ಷಿಮ ಏಷ್ಯಾಕ್ಕೆ ಇರುವ ದೇಶ. ಹಿಟ್ಲರ್ ಕಾಲದಲ್ಲಿ ನಡೆದ ಮಾರಣವೋಮ ಅಲ್ಲಿನ ಕೆಲ ಜನರನ್ನು ಕೆರಳಿಸಿತು. ನಂತರ ಹಿಟ್ಲರ್ ಆಕ್ರಮಣ ಹೆಚ್ಚಾದಂತೆ ಅವರು ಅಲ್ಲಿಂದ ವಲಸೆ ಹೋಗಿ ಇಸ್ರೇಲ್ ನಲ್ಲಿ ನೆಲೆಸಿದರು. ಈ ಕೃತಿಯಲ್ಲಿ ಒಟ್ಟು ಇಸ್ರೇಲ್ ಚರಿತ್ರೆಯನ್ನು , ಸರ್ವಾಧಿಕಾರಿ ಹಿಟ್ಲರ್ ಧೋರಣೆಯನ್ನು ವಿವರಿಸಿದ್ದಾರೆ. ಬುದ್ದಿವಂತರೆಂದು,ಜಗತ್ತಿನ ಇತಿಹಾದಲ್ಲಿ ಶ್ರಮ ಜೀವಿಗಳೆಂದು ಅಪ್ಪಟ ರಾಷ್ಟ್ರ ಪ್ರೇಮಿಗಳೆಂದು, ಜ್ಞಾನಿಗಳೆಂದು ಹಲವು ಇತಿಹಾಸಕಾರರು ಬಣ್ಣಿಸಿರುವ ಯಹೂದಿಗಳು ಹಿಟ್ಲರ್ ನ ಕ್ರೂರತೆಗೆ ದಮನಕ್ಕೆ ಒಳಗಾದವರು. ಕೊನೆಗೆ ಎಲ್ಲವನ್ನು ಕಳೆದುಕೊಂಡ ಯಹೂದಿಗಳು ಅಲ್ಲಿಂದ ವಲಸೆ ಹೋಗಿ ಇಸ್ರೇಲ್ ನಲ್ಲಿ ನೆಲೆಸಿದರು. ನಂತರ ಇಡೀ ಜಗತ್ತಿನ ಚಿತ್ತವು ಇಸ್ರೇಲ್ ನತ್ತ ನೋಡುವಂತೆ ಕೇವಲ 50 ವರ್ಷಗಳಲ್ಲಿ ಜಗತ್ತಿನ ಮುಂದೆ ತಲೆ ಎತ್ತಿ ನಿಂತ ಇಸ್ರೇ ಲ್ ಚರಿತ್ರೆಯ ಬಗ್ಗೆ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಮತ್ತಿಹಳ್ಳಿ ನಾಗರಾಜರಾವ್

ಹಿರಿಯ ಪತ್ರಕರ್ತ ಮತ್ತಿಹಳ್ಳಿ ನಾಗರಾಜ್ ರಾವ್  ಅವರು ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ್ದರು. ಮತ್ತಿಹಳ್ಳಿ ನಾಗರಾಜ್‌ರಾವ್ ಅವರು, 38 ವರ್ಷ ಕಾಲ ಸೇವೆ ಸಲ್ಲಿಸಿ ಹುಬ್ಬಳ್ಳಿ ಆವೃತ್ತಿಯ ಸಂಪಾದಕರಾಗಿದ್ದರು. ಸಿಂಗಾಪುರ, ಯುನೈಟೆಡ್ ಕಿಂಗ್‌ಡಂ ಸೇರಿ 12 ದೇಶಗಳ ಅಧ್ಯಯನ ಪ್ರವಾಸ ಕೈಗೊಂಡು ಇರಾನ್ - ಇರಾಕ್‌ನಲ್ಲಿಯ ಹನಿ ನೀರಾವರಿ ಯೋಜನೆಯ ಯಶಸ್ವಿ ಕುರಿತು ಪುಸ್ತಕ ಪ್ರಕಟಿಸಿದ್ದರು. ಇವರ ಪ್ರವಾಸಿ ಅನುಭವಗಳ 'ಏಷಿಯಾದ ಸುತ', 'ನಾರಿ ನಿನಗೆ ನಮೋ ನಮಃ', 'ಭೂ ಸ್ವರ್ಗ ಸ್ವಿಟ್ಜರ್‌ಲ್ಯಾಂಡ್' ಎಂಬ 4 ಪ್ರವಾಸಿ ಕಥನಗಳ ಕೃತಿಗಳು ಪ್ರಕಟವಾಗಿವೆ. ಅವರಿಗೆ ಪಿ. ...

READ MORE

Related Books