ಮರುಳ ಮುನಿಯನ ಕಗ್ಗ-ತಾತ್ಪರ್ಯ ಸಹಿತ

Author : ಕವಿತಾ ಕೃಷ್ಣ

Pages 292

₹ 125.00




Year of Publication: 2016
Published by: ತನು ಮನು ಪ್ರಕಾಶನ
Address: ಅಂಬಾರಿ, 1267, 1ನೇ ತಿರುವು, ಶ್ರೀರಾಂಪುರ, 2ನೇ ಹಂತ, ಮೈಸೂರು- 570023
Phone: 08212363001

Synopsys

ಮರುಳ ಮುನಿಯನ ಕಗ್ಗ - ತಾತ್ಪರ್ಯ ಕನ್ನಡ ನಾಡು ಕಂಡ ಆಚಾರ್ಯ ಡಿ.ವಿ.ಜಿ ಅವರ ಮರುಳ ಮುನಿಯನ ಕಗ್ಗದ ತಾತ್ಪರ್ಯ ವನ್ನು ಒಳಗೊಂಡಿರುವ ಕೃತಿ. ಮರುಳ ಮುನಿಯನ ಕಗ್ಗಗಳ ತಾತ್ಪರ್ಯಗಳನ್ನು ಕವಿತಾ ಕೃಷ್ಣ ಅವರು ವಿವರಿಸಿದ್ದಾರೆ.

ಡಿ.ವಿ.ಜಿ ಅವರ ಮಂಕು ತಿಮ್ಮನ ಕಗ್ಗ ಮತ್ತು ಮರುಳ ಮುನಿಯನ ಕಗ್ಗ ಈ ಎರಡೂ ಕಗ್ಗಗಳನ್ನು ಕನ್ನಡದ ಭಗವದ್ಗೀತೆಗಳು ಎಂದು ಕರೆಯಲಾಗುತ್ತದೆ. ಮಂಕುತಿಮ್ಮನ ಕಗ್ಗ ಹೊರಗಣ್ಣಾದರೆ, ಮರುಳ ಮುನಿಯನ ಕಗ್ಗ ಒಳಗಣ್ಣಾಗಿದೆ. ನಮ್ಮ ಒಳ ಹೊರ ನೋಟಗಳು ಸಾರ್ಥಕವಾಗಬೇಕಾದರೆ, ಭಾರತೀಯ ಋಷಿ ಜೀವನದ ಮೇಲೆ ಮೂಡಿದ ಜ್ಞಾನ ಲಭಿಸಬೇಕಾದರೆ ಡಿ.ವಿ.ಜಿ. ಅವರ ಈ ಎರಡೂ ಕೃತಿಗಳ ಅಧ್ಯಯನ ಮಾಡಬೇಕಾದುದು ಅಗತ್ಯ. ಕವಿತಾ ಕೃಷ್ಣ ಅವರು ಈ ಹಿಂದೆ ಮಂಕುತಿಮ್ಮನ ಕಗ್ಗವನ್ನು ವ್ಯಾಖ್ಯಾನ ಮಾಡಿದ್ದರು. ಇದೀಗ 'ಮರುಳ ಮುನಿಯನ ಕಗ್ಗ' ವ್ಯಾಖ್ಯಾನಿಸಿದ್ದಾರೆ.

About the Author

ಕವಿತಾ ಕೃಷ್ಣ
(08 September 1945)

ಕವಿ, ನಾಟಕಕಾರ ಹಾಗೂ ಸಂಶೋಧಕ ಕವಿತಾ ಕೃಷ್ಣ ಜನಿಸಿದ್ದು 1945 ಸೆಪ್ಟೆಂಬರ್‌ 8ರಂದು. ತುಮಕೂರಿನ ಕ್ಯಾತಸಂದ್ರ ಹುಟ್ಟೂರು. ತಂದೆ ಕೆಂಚಯ್ಯ, ತಾಯಿ ಸಂಜೀವಮ್ಮ. ಎಂ.ಎ. ಬಿ.ಇಡಿ ಪದವೀಧರರು. ಶಿಕ್ಷಣ ತಜ್ಞರು.  ಕವಿತಾ ಪ್ರಕಾಶನ ಮಾಲೆಯ ಪ್ರಕಾಶಕರು. ಕನ್ನಡ ಪರ ಹೋರಾಟಗಾರರು.  ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ತುಮಕೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ,  ಕೃತಿಗಳು: (ಕವನ ಸಂಕಲನ-20), ಕಾವ್ಯಾಂಜಲಿ,2. ಕಾವ್ಯ ಚಿಲುಮೆ, 2. ಕವನ ತರಂಗ 4. ಕವನ ಮಂಜರಿ, 5. ಕೃಷ್ಣನ ಕೊಳಲು 6. ಕನ್ನಡ ಕಹಳೆ ( ಲಾವಣಿ ಸಂಕಲನ), 7. ತೇರನೇರ ಬಾ ತಾಯಿ ...

READ MORE

Related Books