ಮಠಗಳು ಮಾರಾಟಕ್ಕಿವೆ

Author : ಲಿಂಗಣ್ಣ ಸತ್ಯಂಪೇಟೆ

Pages 166

₹ 125.00




Year of Publication: 2013
Published by: ಬಸವ ಮಾರ್ಗ ಪ್ರಕಾಶನ
Address: ಶ್ರೀ ಚರಬಸವೇಶ್ವರ ಗದ್ದುಗೆ ರಸ್ತೆ, ಶಹಾಪುರ, ಜಿಲ್ಲೆ: ಯಾದಗಿರಿ-585223
Phone: 9480161315

Synopsys

ಹಿರಿಯ ಚಿಂತಕ ಲಿಂಗಣ್ಣ ಸತ್ಯಂಪೇಟೆ ಅವರ ವೈಚಾರಿಕ ಕೃತಿ-ಮಠಗಳು ಮಾರಾಟಕ್ಕಿವೆ. ಸ್ವಾತಂತ್ಯ್ರಪೂರ್ವದಲ್ಲಿ ಮಠಗಳು ಆಯಾ ಸ್ಥಳೀಯ ಜನರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು ಮರೆಯುವಂತಿಲ್ಲ. ಇಂದಿಗೂ ಕೆಲವು ಮಠಗಳು ತಮ್ಮ ಶಿಕ್ಷಣ ದಾಸೋಹ ಮಾತ್ರವಲ್ಲ ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿವೆ. ಬಸವಾದಿ ಶರಣರ ಚಿಂತನೆಗಳ ಪ್ರಚಾರ-ಪ್ರಸಾರಕ್ಕೆ ಕಂಕಣಬದ್ಧವಾಗಿವೆ. ಆದರೆ, ಬಹುತೇಕ ಮಠಗಳು ತಮ್ಮ ಈ ದಾಸೋಹಂ ಭಾವದಿಂದ ವಿಮುಖವಾಗುತ್ತಿರುವುದು ಸಹ ತಳ್ಳಿ ಹಾಕುವಂತಿಲ್ಲ.ಬಸವಾದಿ ಶರಣರ ಹೆಸರಿನಲ್ಲಿ ನಡೆಯುವ ಈ ಮಠಗಳು .ಶಿಕ್ಷಣವನ್ನು ವ್ಯಾಪಾರಕ್ಕಿಳಿಸಿವೆ. ಜನಸಾಮಾನ್ಯರನ್ನು, ಧಾರ್ಮಿಕವಾಗಿ, ಸಾಮಾಜಿಕವಾಗಿಯೂ ಶೋಷಿಸುತ್ತಿವೆ ಮಾತ್ರವಲ್ಲ, ನೈತಿಕವಾಗಿಯೂ ಅರ್ಧಪತನಕ್ಕೆ ಇಳಿದಿವೆ. ಈ ಹಿನ್ನೆಲೆಯಲ್ಲಿ, ಮಠಗಳ ಸೇವೆ-ಕರ್ತವ್ಯಗಳನ್ನು ನೆನಪಿಸಿಕೊಡುವ ರೀತಿಯಲ್ಲಿ ಇಲ್ಲಿಯ ಬರಹಗಳು ಮಠ-ಮಠಾಧೀಶರನ್ನು ಎಚ್ಚರಿಸುತ್ತವೆ. ಮಾತ್ರವಲ್ಲ; ಸಾರ್ವಜನಿಕರು ಸಹ ತಮ್ಮ ಎಂದಿನ ಸಾಂಪ್ರದಾಯಿಕ ಭಾವುಕ ನಡೆಯನ್ನು ಪುನರಾವಲೋಕಿಸುವಂತೆಯೂ ಪ್ರೇರಣೆಯಾಗಿ ಬರಹಗಳಿದ್ದು, ಮಠಗಳ ಮಾನವೀಯ ಪ್ರಜ್ಞೆಯನ್ನು ಪುನಃ ಬಡಿದೆಬ್ಬಿಸುತ್ತವೆ. ‘ಮಠಗಳು ಮಾರಾಟಕ್ಕಿವೆ’ ಎಂಬ ಕೃತಿಯ ಶೀರ್ಷಿಕೆಯು ಮೇಲ್ನೋಟಕ್ಕೆ, ಕಟುವಾಗಿ ಕಂಡುಬಂದರೂ, ಅವುಗಳು ನೀಡುತ್ತಾ ಬಂದಿರುವ ಸಮಾಜ ಸೇವೆಯನ್ನು ಸ್ಮರಿಸಿ, ಉದ್ದೇಶವನ್ನು ಮಾತ್ರ ನೆನಪಿಸುತ್ತವೆ ಹಾಗೂ ಕಾಯಕ-ದಾಸೋಹವನ್ನು ತಮ್ಮ ಉಸಿರಾಗಿಸಿಕೊಳ್ಳಲಿ ಎಂಬ ಆಶಯಗಳನ್ನು ಒಳಗೊಂಡಿದೆ.

About the Author

ಲಿಂಗಣ್ಣ ಸತ್ಯಂಪೇಟೆ - 25 July 2012)

ಪತ್ರಕರ್ತ, ಶಿಕ್ಷಕ ಲಿಂಗಣ್ಣ ಸತ್ಯಂಪೇಟೆ ಅವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದವರು. 1980ರಲ್ಲಿ ಲಂಕೇಶ್ ಪತ್ರಿಕೆಗೆ ಲೇಖನಗಳನ್ನು ಬರೆಯಲು ಆರಂಭಿಸಿ, ಇಡೀ ಹೈದ್ರಾಬಾದ್ -ಕರ್ನಾಟಕದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ದೋಷಪೂರಿತ ವ್ಯವಸ್ಥೆ ವಿರುದ್ಧ ಕಟುವಾಗಿ ಬರೆದು, ಜನರ ಜಾಗೃತಿಯ ಅನಿವಾರ್ಯತೆಯನ್ನು ಎಚ್ಚರಿಸಿದ್ದರು.  ಅಗ್ನಿಅಂಕುರ -ವಾರಪತ್ರಿಕೆಯನ್ನು 10 ವರ್ಷ ಕಾಲ ನಡೆಸಿ, ನಂತರ ಬಸವ ಮಾರ್ಗ ಪತ್ರಿಕೆಯನ್ನು ಹುಟ್ಟುಹಾಕಿದರು. 12ನೇ ಶರಣರ ವಿಚಾರಗಳ ಹಿನ್ನೆಲೆಯಲ್ಲಿ ‘ಮನೆಯಲ್ಲಿ ಮಹಾಮನೆ’ ಎಂಬ ವಚನಗಳ ಓದು, ಉಪನ್ಯಾಸ ಕಾರ್ಯಕ್ರಮಗಳನ್ನು ಮನೆಮನೆಯಲ್ಲೇ ಹಮ್ಮಿಕೊಳ್ಳುವುದು ಇದರ ವೈಶಿಷ್ಟ್ಯವಾಗಿತ್ತು. ‘ಬಸವ ಮಾರ್ಗ ಪ್ರತಿಷ್ಠಾನ’ ಎಂಬ ಸಂಘಟನೆ ...

READ MORE

Related Books