ಮತ್ತೆ ಕಲ್ಯಾಣದೆಡೆಗೆ

Author : ವೀರಪ್ಪ ಮರಳವಾಡಿ

Pages 120

₹ 150.00




Year of Publication: 2023
Published by: ಚಾರುಮತಿ ಪ್ರಕಾಶನ
Address: # 224, 4ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು - 560018
Phone: 94482 35553

Synopsys

‘ಮತ್ತೆ ಕಲ್ಯಾಣದೆಡೆಗೆ’ ವೀರಪ್ಪ ಮರಳವಾಡಿ ಅವರ ಕೃತಿಯಾಗಿದೆ. ಕೆಲವು ಆಧುನಿಕ ವಚನಕಾರರಂತೆ ಇಲ್ಲಿಯವು ಕೇವಲ ರೂಪಸಾದೃಶ್ಯದ ವಚನಗಳಲ್ಲ. ವೀರಪ್ಪ ಮರಳವಾಡಿಯವರು ತಮ್ಮ ಅಭಿವ್ಯಕ್ತಿಯ ಅನಿವಾರ ಮಾಧ್ಯಮವೆಂಬಂತೆ ಆಧುನಿಕ ಭಾವ ಸಂಘರ್ಷಗಳನ್ನು ಸಮರ್ಥವಾಗಿ 'ವಚನಿಸಿದ್ದಾರೆ. ಅವುಗಳಲ್ಲಿ ಸಂಕೀರ್ಣತೆಯಿದೆ, ಸರಳತೆಯ ಸೊಗಸಿದೆ, ಚಿಂತನೆಗಳನ್ನು ಪ್ರಚೋದಿಸುವ ಜೀವಾಳವಿದೆ. ಎಲ್ಲ ವಚನಗಳಲ್ಲೂ ಕನ್ನಡ ಸುಲಲಿತವಾಗಿ, ಸಾರ್ಥಕವಾಗಿ ನುಡಿದಿದೆ. ಹೌದು, ಕೆಲವು ವಚನಗಳಂತೂ ಅರ್ಥವಿಲಾಸಗಳಿಂದ ಅಂತರಂಗದಲ್ಲಿ ಅನುರಣಿಸುತ್ತವೆ. ವಚನಕಾರರ ಸಾಮಾಜಿಕ, ಧಾರ್ಮಿಕ, ಮಾನವೀಯತೆಯ ಕಳಕಳಿ ಹೇಗೆ ಎಲ್ಲ ಕಾಲಕ್ಕೂ, ಅದರಲ್ಲೂ ನಮ್ಮ ಕಾಲಕ್ಕೆ ಪ್ರಸ್ತುತವೋ ಹಾಗೇ ಅವರ ಅಭಿವ್ಯಕ್ತಿ ಮಾಧ್ಯಮದ ವಚನಗಳು ಇಂದಿಗೂ ಕೂಡ ಪ್ರಸ್ತುತವೆಂಬುದನ್ನು ಈ ಲೇಖಕರ ವಚನಗಳು ದೃಢೀಕರಿಸುತ್ತವೆ ಎಂದು ಸು. ರುದ್ರಮೂರ್ತಿ ಶಾಸ್ತ್ರಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವೀರಪ್ಪ ಮರಳವಾಡಿ

ವೀರಪ್ಪ ಮರಳವಾಡಿಯವರು ಚಲನಚಿತ್ರ ದೂರದರ್ಶನ ಮತ್ತು ಸಾಕ್ಷ್ಯಚಿತ್ರ ಕ್ಷೇತ್ರದಲ್ಲಿ ಲೇಖಕರಾಗಿ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ರಾಮನಗರ ಜಿಲ್ಲೆ ಕನಕಪುರ ತಾಲೂಕು ಮರಳವಾಡಿಯವರು. ಶಿಕ್ಷಣದ ನಂತರ ಎನ್.ಜಿ.ಇ.ಎಫ್ ಕಾರ್ಖಾನೆಯಲ್ಲಿ ವೃತ್ತಿ ತರಬೇತಿ ಪಡೆದ ಇವರು  ಹರ್ಬಟ್‌ ಇಂಡಿಯಾ ಎಂಬ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿದರು. ರಂಗಭೂಮಿ ಪ್ರತಿಭೆ. ಹಲವಾರು ನಾಟಕಗಳಲ್ಲಿ ನಟಿಸುವುದಲ್ಲದೆ ನಿರ್ದೇಶನವನ್ನೂ ಸಹ ಮಾಡಿರುತ್ತಾರೆ. ಚಿತ್ರರಂಗವನ್ನೂ ಪ್ರವೇಶಿಸಿದರು. ಈ ವೇಳಗಾಗಲೆ ಸಾಕಷ್ಟು ರಂಗಭೂಮಿ ಅನುಭವ ಹೊಂದಿದ್ದ ಅವರು ಚಿತ್ರರಂಗದಲ್ಲಿ ಲೇಖಕನಾಗಿ ಗುರುತಿಸಿಕೊಂಡರು. ಹಲವಾರು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಒದಗಿಸಿದರು. ಒಂದು ಚಿತ್ರವನ್ನೂ ಬರೆದು ನಿರ್ದೇಶಿಸಿದ್ದಾರೆ. ...

READ MORE

Related Books