ಮತ್ತೆ ರಾಮನ ಕತೆ

Author : ಬನ್ನಂಜೆ ಗೋವಿಂದಾಚಾರ್ಯ

Pages 128

₹ 130.00




Year of Publication: 2015
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಹಿರಿಯ ವಿದ್ವಾಂಸರೂ, ಸಾಹಿತಿಯೂ ಆದ ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತದಿಂದ ಕನ್ನಡಕ್ಕೆ ಮಾಡಿರುವ ನಾಟಕ ಕೃತಿ ’ಮತ್ತೆ ರಾಮನ ಕತೆ’.

ಮೂಲ ಭವಭೂತಿ ಕವಿಯ  ಉತ್ತರ ರಾಮ ಚರಿತಂ ನಾಟಕವನ್ನು ಕನ್ನಡಕ್ಕೆ ತಂದಿರುವ ಬನ್ನಂಜೆಯವರು ಮಹಾವೀರನಾದ ರಾಮನ ಕತೆಯನ್ನು,ಮಹಾವೀರನಾದ ರಾವಣನನ್ನು ಕೊಂದ ಏಕೈಕ ವೀರನ ಕತೆಯನ್ನು ಪ್ರಸ್ತುತ ಪಡಿಸುತ್ತದೆ.

ರಾಮನ ಜೀವನದ ಉತ್ತರಾರ್ಧದ ಕತೆ, ರಾಮಾಯಣದ ಉತ್ತರಕಾಂಡದ ಸೀತಾಪರಿತ್ಯಾಗದ ಕತೆ ’ಉತ್ತರರಾಮಚರಿತೆ’. ಮತ್ತು ಲೋಕೋತ್ತರನಾದ ರಾಮನ ಚರಿತೆಯನ್ನೂ, ಅವನ ಬಾಳಿನ ಉತ್ತರಭಾಗದ ಚರಿತೆ ಕೂಡ ಆಗಿದೆ. ಈ ನಾಟಕದಲ್ಲಿ ಕರುಣಾರಸವನ್ನೇ ಕವಿ ಪ್ರಧಾನವಾಗಿರಿಕೊಂಡಿದ್ದಾನೆ. ಅಷ್ಟೇ ಹಿತವಾಗಿ ಶೃಂಗಾರ ರಸವೂ, ವೀರರಸವೂ ಸೇರಿಕೊಂಡಿದೆ. ರಾಮನ ವಿರಹ ಸೀತಾಗಮನದಿಂದ ಇದ್ದಕ್ಕಿದ್ದಂತೆ ಕರುಣ ಶೃಂಗಾರವಾಗಿ ಬಿಡುವಷ್ಟು ನಾಟಕ ಪ್ರಧಾನವಾಗುತ್ತದೆ.

About the Author

ಬನ್ನಂಜೆ ಗೋವಿಂದಾಚಾರ್ಯ

 ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಇವರು ಉಡುಪಿ  ಜಿಲ್ಲೆಯ ಅಂಬಲಪಾಡಿಯಲ್ಲಿ  1936 ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.  ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ , ಶಿವಸೂಕ್ತ, ...

READ MORE

Related Books