ಮತ್ತೊಂದು ಮಹಾಭಾರತ

Author : ಸಿ.ಎಂ.ಗೋವಿಂದರೆಡ್ಡಿ

Pages 638

₹ 460.00




Year of Publication: 2015
Published by: ಅನನ್ಯ ಪ್ರಕಾಶನ
Address: #7533, 'ಅನನ್ಯ', 5ನೇ ಮುಖ್ಯರಸ್ತೆ , 2ನೇ ಅಡ್ಡರಸ್ತೆ , ರೈಲ್ವೇನಿಲ್ದಾಣ ಅಂಚೆಕಚೇರಿ ಹತ್ತಿರ, ಆದರ್ಶನಗರ, ಮಾಲೂರು- 563130, ಕೋಲಾರ ಜಿಲ್ಲೆ, ಕರ್ನಾಟಕ.
Phone: 9448587027

Synopsys

ಮಕ್ಕಳ ಮಹಾಕಾವ್ಯ. ಮೊಟ್ಟಮೊದಲಿಗೆ 614 ಪುಟಗಳಷ್ಟು ವ್ಯಾಪ್ತಿಯಲ್ಲಿ ಮಹಾಕಾವ್ಯ ಈಗ ಪ್ರಕಟವಾಗಿದೆ. ನೀಳ್ಗವಿತೆಗಳ ಕಡೆಗೇ ಹೆಚ್ಚು ಒಲವು ತೋರುವ ಡಾ.ಸಿ.ಎಂ.ಗೋವಿಂದರೆಡ್ಡಿ ಈಗ ಮಹಾಭಾರತದ ಕತೆಯನ್ನ ನಿಡಿದಾಗಿ ಮಕ್ಕಳಿಗಾಗಿಯೇ ಉದ್ದೇಶಿಸಿ ರಚಿಸಿದ್ದಾರೆ. ಬಹುಶಃ ಮಹಾಭಾರತದ ಯಾವ ಭಾಗವನ್ನೂ ಬಿಡದೆ ಎಲ್ಲವನ್ನೂ ಒಳಗೊಂಡಿರುವ ಕತೆ ಇಲ್ಲಿ ಕಾಣಸಿಗುತ್ತದೆ. ಸರಳ ಕನ್ನಡದಲ್ಲಿ ಸುಲಲಿತವಾಗಿ ಹರಿದುಹೋಗಿರುವ ಬರವಣಿಗೆ ಕತೆಯನ್ನ ವಿವರವಾಗಿ ಬಿಚ್ಚಿಡುತ್ತ ಹೋಗಿದೆ. 

ಈ ಕಾವ್ಯದ ಭಾಷೆ ಈವತ್ತಿನ ಆಡುನುಡಿಗೆ ಹತ್ತಿರದ್ದು. ಹಾಗಾಗಿ ಇದು ಈವತ್ತಿನ ಕಥೆಯಾಗಿ ಭಾಷಿಕವಾಗಿಯೂ ತನ್ನನ್ನು ತೋರಿಸಿಕೊಳ್ಳುವುದು. ನಿಷ್ಠುರವಾದ ಜೀವನಪರ ನಿಲುವು ಕಥನದ ಉದ್ದಕ್ಕೂ ಕಂಡುಬರುವುದು. ಸನಾಜಮುಕತೆ, ಶೋಷಿತ ವರ್ಗದ ಪರವಾದ ನಿಲುವು ಭಾರತ ಕಥೆಗೆ ಒಂದು ಹೊಸ ಪರಿವೇಷ ವನ್ನೇ ನೀಡಿವೆ. ಕನ್ನಡದಲ್ಲಿ ಮಕ್ಕಳಿಗಾಗಿಯೇ ರಚಿತವಾದ ಮೊದಲ ದೀರ್ಘಕಾವ್ಯವಿದು! ಈ ಹೆಚ್ಚಳ ಕೃತಿಗೆ ತನ್ನಷ್ಟಕ್ಕೇ ಒಂದು ಮಹತ್ವವನ್ನು ದೊರಕಿಸಿಕೊಡುತ್ತದೆ. ಸಹಜ ಧರ್ಮದಲ್ಲಿ ಸಲೀಸಾಗಿ ಸಾಗುವ ಮನೋಹರವಾದ ಕಥನವು ಮಕ್ಕಳಿಗೆ ಮಾತ್ರವಲ್ಲ ಭಾರತ ಕಥೆಯಲ್ಲಿ ಆಸಕ್ತಿಯುಳ್ಳ ಹಿರಿಯರಿಗೂ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.

 

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Related Books